ಗೀತಾ ಮತ್ತು ಅದೇ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಅವರ ಪುತ್ರ ಭರತ ಬಾರಕೇರ ಹಾಗೂ ಸಹ ಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ, ಆರೋಪಿ ಸಹ ಶಿಕ್ಷಕ ಮುತ್ತಪ್ಪ ಹಡಗಲಿ ಡಿ. 20ರಂದು ಸಲಿಕೆಯ ಕಾವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಭರತ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದ. ಗೀತಾ ಅವರನ್ನು ಕಿಮ್ಸ್ಗೆದಾಖಲಿಸಲಾಗಿತ್ತು.