ಇತ್ತೀಚೆನ ಒಂದು ವಾರದಿಂದ ರಾತ್ರಿ ಮತ್ತು ಬೆಳಗಿನ ಜಾವ ತಂಪಾದ ಗಾಳಿ ಬೀಸುತ್ತಿತ್ತು. ಇದರಿಂದ ಚಳಿಯ ಅನುಭವವಾಗುತ್ತಿತ್ತು. ಶನಿವಾರವಂತೂ ಬಹಳಷ್ಟು ಜನ ಎಂದಿನಂತೆ ಮನೆಬಿಟ್ಟು ಹೊರಗಡೆ ಬರಲಿಲ್ಲ. ಮೋಡಮುಸುಕಿದ ವಾತಾವರಣ ಮತ್ತು ಕೆಲವು ನಿಮಿಷಗಳ ಕಾಲ ಜಿಟಿಜಿಟಿಯಾಗಿ ಮಳೆಯೂ ಬಂತು. ನೃಪತುಂಗ ಬೆಟ್ಟದ ಅಂಚಿನಿಂದ ಸುತ್ತಲಿನ ದೃಶ್ಯವನ್ನು ನೋಡಿದಾಗ ಈಡೀ ಹುಬ್ಬಳ್ಳಿ ನಗರವೇ ಮಂಜು ಹಾಸಿ ಹೊದ್ದು ಮಲಗಿದಂತೆ ಕಾಣುತ್ತಿತ್ತು. ಹೀಗಾಗಿ ಇಂದಿರಾ ಗಾಜಿನ ಮನೆ, ಕುಂಬಕೋಣಂ ಪ್ಲಾಂಟ್, ಅರ್ಜುನ ವಿಹಾರ ಸೇರಿದಂತೆ ಪ್ರಮುಖ ಉದ್ಯಾನಗಳಲ್ಲಿ ಹೆಚ್ಚು ಜನ ವಾಯುವಿಹಾರಕ್ಕೆ ಬಂದಿರಲಿಲ್ಲ. ಹಾಲು ಹಾಕುವವರು, ಪತ್ರಿಕೆ ಹಂಚುವ ಹುಡುಗರು ಮೈ ನಡುಗಿಸುವ ಚಳಿಯಲ್ಲಿಯೇ ಕೆಲಸ ನಿರ್ವಹಿಸಿದರು.