‘ವಿಶಾಲವಾಗಿ ಹರಡಿದ್ದ ಆಕಾಶ ಮರದಿಂದ ಉತ್ತಮ ಗಾಳಿ ಮತ್ತು ನೆರಳು ಸಿಗುತಿತ್ತು. ಮನೆ ನಿರ್ಮಾಣಕ್ಕೆ ಆ ಮರದಿಂದ ಯಾವ ಅಡ್ಡಿಯೂ ಇರಲಿಲ್ಲ. ಅನಗತ್ಯವಾಗಿ ರಂಬೆಗಳನ್ನು ಕಡಿದು, ಮರ ನಾಶ ಪಡಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಹಿರೇಮಠ್ ದೂರಿದರು.
‘ಸ್ಮಾರ್ಟ್ ಸಿಟಿ ಅಭಿವೃದ್ಧಿ ನೆಪದಲ್ಲಿ ಈಗಾಗಲೇ ನಗರದಲ್ಲಿ ಸಾಕಷ್ಟು ಗಿಡ–ಮರಗಳನ್ನು ನಾಶ ಮಾಡಲಾಗಿದೆ. ಬಡಾವಣೆ, ನಗರಗಳಲ್ಲಿ ಇರುವ ಮರಗಳನ್ನಾದರೂ ಸಂರಕ್ಷಿಸಬೇಕಾದ ನಿವಾಸಿಗಳೇ ಸಕಾರಣವಿಲ್ಲದೇ ಈ ರೀತಿ ಮರಗಳನ್ನು ನಾಶ ಮಾಡುತ್ತಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.