<p><strong>ಉಪ್ಪಿನಬೆಟಗೇರಿ</strong>: ಮುಂಗಾರು ಹಂಗಾಮಿನ ಬಿತ್ತನೆ ಮುಗಿದು ಈಗಾಗಲೇ ಹದಿನೈದು ದಿನಗಳಾಗಿದ್ದು, ರೈತರು ಕೃಷಿ ಭೂಮಿಯಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ನಾಶಕ್ಕೆ ಎಡೆ ಹೊಡೆಯಲು ಎತ್ತಿಗೆ ನಾಲ ಕಟ್ಟುವುದು ಹಾಗೂ ಎಡೆ ಕುಂಟಿ ಸೇರಿ ಇನ್ನಿತರ ಸಲಕರಣೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ.</p>.<p>ಉಪ್ಪಿನಬೆಟಗೇರಿ, ಕೊಟಬಾಗಿ, ಲೋಕೂರ, ಯಾದವಾಡ, ಹಾರೋಬೆಳವಡಿ, ಕರಡಿಗುಡ್ಡ, ಮರೇವಾಡ, ಅಮ್ಮಿನಬಾವಿ ಭಾಗದಲ್ಲಿ ಬಹುತೇಕ ಬಿತ್ತನೆ ಮುಗಿದಿದೆ. ನರೇಂದ್ರ, ಗರಗ, ತಡಕೋಡ, ಮಾದನಬಾವಿ, ತೇಗೂರ, ಕೋಟೂರಲ್ಲಿ ಸಾದಾರಣ ಮಳೆಯಾಗಿದೆ. ಕೆಲವು ಕಡೆ ತೇವಾಂಶದ ಕೊರತೆಯಿಂದ ಬಿತ್ತಿದ ಬೀಜ ಮೊಳಕೆಯೊಡೆಯದ ಕಾರಣ ಮುರಿದು ಮತ್ತೆ ಬಿತ್ತಲಾಗಿದೆ.</p>.<p>ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿದೆ. ಕೆಲ ರೈತರು ಬಿತ್ತನೆಗಾಗಿ ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಇನ್ನೂ ಕೆಲವು ರೈತರು ಕೊಳವೆಬಾವಿ ಮೂಲಕ ನೀರುಣಿಸಿ ಬಿತ್ತಿದ್ದಾರೆ.</p>.<p>ಹೆಸರು, ಉದ್ದು, ಸೋಯಾಬಿನ್, ತೊಗರಿ, ಶೇಂಗಾ ಬಿತ್ತನೆ ಮಾಡಲಾಗಿದ್ದು, ಬೀಜ ಮೊಳಕೆಯೊಡೆದು ಎರಡ್ಮೂರು ಎಲೆಗಳಾಗಿವೆ. ಇವುಗಳ ನಡುವೆ ಕಳೆ ಬೆಳೆಯುತ್ತಿದ್ದು, ರೈತರು ಈಗ ಕಳೆ ನಾಶಕ್ಕೆ ಮುಂದಾಗಿದ್ದಾರೆ.</p>.<div><blockquote>ರೈತಾಪಿ ಜನರು ಎತ್ತುಗಳ ಕಾಲಿಗೆ ಕಳಗ ಮತ್ತು ನಾಲ ಕಟ್ಟಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹದ ಬಂದ ನಂತರ ಕಳೆ ನಾಶಕ್ಕೆ ಎಡೆ ಹೊಡೆಯುತ್ತೇವೆ.</blockquote><span class="attribution">– ವೀರೇಶ ಗೆದ್ದಿಕೇರಿ, ರೈತ ಪುಡಕಲಕಟ್ಟಿ</span></div>.<div><blockquote>ನಾಲ ಕಟ್ಟುವುದು ನಮ್ಮ ಕುಲ ಕಸುಬು. ಸಂತೆಯಲ್ಲಿ ಇಲ್ಲವೇ ರೈತರ ಮನೆಗೆ ಹೋಗಿ ಜಾನುವಾರುಗಳ ಕಾಲಿಗೆ ಕಳಗ ನಾಲ ಕಟ್ಟಿ ಕೊಡುತ್ತೇವೆ.</blockquote><span class="attribution">– ಫಯಾಜ್ ನಾಲಬಂದಿ, ಧಾರವಾಡ </span></div>.<p><strong>‘ಹದ ಬರುವುದು ಕಾಯುತ್ತಿದ್ದೇವೆ’</strong></p><p>ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಭೂಮಿ ತೇವಾಂಶದಿಂದ ಕೂಡಿದ್ದು ಎಡೆ ಹೊಡೆಯಲು ಸಾಧ್ಯವಾಗುತ್ತಿಲ್ಲ. ರೈತರು ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಮಳೆ ಬಿಡುವು ಕೊಟ್ಟರೆ ಕೃಷಿ ಚಟುವಟಿಕೆ ಮತ್ತೆ ಗರಿಗೆದರುತ್ತದೆ ಎಂದ ರೈತ ಬಸಪ್ಪ ಹೆಬ್ಬಳ್ಳಿ ಹೇಳಿದರು.</p><p>ಒಂದು ಎತ್ತಿನ ಕಾಲಿಗೆ ಕಳಗ ಕಟ್ಟಲು ₹150ರಿಂದ ₹200 ನಾಲ ಕಟ್ಟಲು ಒಂದು ಎತ್ತಿಗೆ ₹400 ರಿಂದ ₹450 ಪಡೆಯುತ್ತಾರೆ. ತಿಂಗಳಿಗೊಮ್ಮೆ ಕಳಗ ಕಟ್ಟುವುದು ಮತ್ತು ನಾಲ ಕಟ್ಟುವುದರಿಂದ ಜಾನುವಾರುಗಳ ಕಾಲಿನ ಉಗುರಿನ ತುದಿಗೆ ಗಾಯವಾಗುವುದು ತಪ್ಪುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಬೆಟಗೇರಿ</strong>: ಮುಂಗಾರು ಹಂಗಾಮಿನ ಬಿತ್ತನೆ ಮುಗಿದು ಈಗಾಗಲೇ ಹದಿನೈದು ದಿನಗಳಾಗಿದ್ದು, ರೈತರು ಕೃಷಿ ಭೂಮಿಯಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ನಾಶಕ್ಕೆ ಎಡೆ ಹೊಡೆಯಲು ಎತ್ತಿಗೆ ನಾಲ ಕಟ್ಟುವುದು ಹಾಗೂ ಎಡೆ ಕುಂಟಿ ಸೇರಿ ಇನ್ನಿತರ ಸಲಕರಣೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ.</p>.<p>ಉಪ್ಪಿನಬೆಟಗೇರಿ, ಕೊಟಬಾಗಿ, ಲೋಕೂರ, ಯಾದವಾಡ, ಹಾರೋಬೆಳವಡಿ, ಕರಡಿಗುಡ್ಡ, ಮರೇವಾಡ, ಅಮ್ಮಿನಬಾವಿ ಭಾಗದಲ್ಲಿ ಬಹುತೇಕ ಬಿತ್ತನೆ ಮುಗಿದಿದೆ. ನರೇಂದ್ರ, ಗರಗ, ತಡಕೋಡ, ಮಾದನಬಾವಿ, ತೇಗೂರ, ಕೋಟೂರಲ್ಲಿ ಸಾದಾರಣ ಮಳೆಯಾಗಿದೆ. ಕೆಲವು ಕಡೆ ತೇವಾಂಶದ ಕೊರತೆಯಿಂದ ಬಿತ್ತಿದ ಬೀಜ ಮೊಳಕೆಯೊಡೆಯದ ಕಾರಣ ಮುರಿದು ಮತ್ತೆ ಬಿತ್ತಲಾಗಿದೆ.</p>.<p>ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿದೆ. ಕೆಲ ರೈತರು ಬಿತ್ತನೆಗಾಗಿ ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಇನ್ನೂ ಕೆಲವು ರೈತರು ಕೊಳವೆಬಾವಿ ಮೂಲಕ ನೀರುಣಿಸಿ ಬಿತ್ತಿದ್ದಾರೆ.</p>.<p>ಹೆಸರು, ಉದ್ದು, ಸೋಯಾಬಿನ್, ತೊಗರಿ, ಶೇಂಗಾ ಬಿತ್ತನೆ ಮಾಡಲಾಗಿದ್ದು, ಬೀಜ ಮೊಳಕೆಯೊಡೆದು ಎರಡ್ಮೂರು ಎಲೆಗಳಾಗಿವೆ. ಇವುಗಳ ನಡುವೆ ಕಳೆ ಬೆಳೆಯುತ್ತಿದ್ದು, ರೈತರು ಈಗ ಕಳೆ ನಾಶಕ್ಕೆ ಮುಂದಾಗಿದ್ದಾರೆ.</p>.<div><blockquote>ರೈತಾಪಿ ಜನರು ಎತ್ತುಗಳ ಕಾಲಿಗೆ ಕಳಗ ಮತ್ತು ನಾಲ ಕಟ್ಟಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹದ ಬಂದ ನಂತರ ಕಳೆ ನಾಶಕ್ಕೆ ಎಡೆ ಹೊಡೆಯುತ್ತೇವೆ.</blockquote><span class="attribution">– ವೀರೇಶ ಗೆದ್ದಿಕೇರಿ, ರೈತ ಪುಡಕಲಕಟ್ಟಿ</span></div>.<div><blockquote>ನಾಲ ಕಟ್ಟುವುದು ನಮ್ಮ ಕುಲ ಕಸುಬು. ಸಂತೆಯಲ್ಲಿ ಇಲ್ಲವೇ ರೈತರ ಮನೆಗೆ ಹೋಗಿ ಜಾನುವಾರುಗಳ ಕಾಲಿಗೆ ಕಳಗ ನಾಲ ಕಟ್ಟಿ ಕೊಡುತ್ತೇವೆ.</blockquote><span class="attribution">– ಫಯಾಜ್ ನಾಲಬಂದಿ, ಧಾರವಾಡ </span></div>.<p><strong>‘ಹದ ಬರುವುದು ಕಾಯುತ್ತಿದ್ದೇವೆ’</strong></p><p>ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಭೂಮಿ ತೇವಾಂಶದಿಂದ ಕೂಡಿದ್ದು ಎಡೆ ಹೊಡೆಯಲು ಸಾಧ್ಯವಾಗುತ್ತಿಲ್ಲ. ರೈತರು ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಮಳೆ ಬಿಡುವು ಕೊಟ್ಟರೆ ಕೃಷಿ ಚಟುವಟಿಕೆ ಮತ್ತೆ ಗರಿಗೆದರುತ್ತದೆ ಎಂದ ರೈತ ಬಸಪ್ಪ ಹೆಬ್ಬಳ್ಳಿ ಹೇಳಿದರು.</p><p>ಒಂದು ಎತ್ತಿನ ಕಾಲಿಗೆ ಕಳಗ ಕಟ್ಟಲು ₹150ರಿಂದ ₹200 ನಾಲ ಕಟ್ಟಲು ಒಂದು ಎತ್ತಿಗೆ ₹400 ರಿಂದ ₹450 ಪಡೆಯುತ್ತಾರೆ. ತಿಂಗಳಿಗೊಮ್ಮೆ ಕಳಗ ಕಟ್ಟುವುದು ಮತ್ತು ನಾಲ ಕಟ್ಟುವುದರಿಂದ ಜಾನುವಾರುಗಳ ಕಾಲಿನ ಉಗುರಿನ ತುದಿಗೆ ಗಾಯವಾಗುವುದು ತಪ್ಪುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>