<p>ಹುಬ್ಬಳ್ಳಿ: ಕೊರೊನಾ ಸೋಂಕಿನ ಆತಂಕದ ನಡುವೆಯೂ ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮ ಕಂಡು ಬಂತು.</p>.<p>ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ ಪೂಜೆಯಂದು ಗೌರಿ ಮೂರ್ತಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಐದಾರು ತರಹದ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಈ ಮೊದಲು ಪ್ರತಿ ವರ್ಷ ಸಂಜೆ ಮುತೈದೆಯರನ್ನು ಮನೆಗೆ ಕರೆಯಿಸಿ ಅರಿಶಿಣ ಮತ್ತು ಕುಂಕುಮ ನೀಡುವ ಶಾಸ್ತ್ರ ಮಾಡಲಾಗುತ್ತಿತ್ತು. ಸೋಂಕಿನ ಭೀತಿ ಇರುವ ಕಾರಣ ಈ ವರ್ಷ ಹಬ್ಬದ ಆಚರಣೆ ಆಯಾ ಮನೆಗಳಿಗಷ್ಟೇ ಸೀಮಿತವಾಗಿತ್ತು.</p>.<p>ನಗರದ ದಾಜೀಬಾನ ಪೇಟೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಾಳೆ ದಿಂಡು ಕಟ್ಟಿ, ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆದರು. ಮನೆಗಳಲ್ಲಿಯೂ ಆಚರಣೆಯ ಸಡಗರ ಕಂಡು ಬಂತು.</p>.<p>ಮಾಸ್ಕ್ ಹಂಚಿಕೆ: ಸಾಂಪ್ರದಾಯಿಕ ಆಚರಣೆಯ ಜೊತೆಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಗೋಕುಲ ರಸ್ತೆಯಲ್ಲಿರುವ ಅಕ್ಷಯ ಪಾರ್ಕ್ನ ವಿಜಯಲಕ್ಷ್ಮಿ ಕಟ್ಟಿಮಠ ಅವರು ತಮ್ಮ ಮನೆಗೆ ಬಂದಿದ್ದವರಿಗೆ ಮಾಸ್ಕ್ ನೀಡಿದರು.</p>.<p>‘ವರಮಹಾಲಕ್ಷ್ಮಿ ಪೂಜೆಗೆ ಎರಡ್ಮೂರು ದಿನಗಳಿಂದ ತಯಾರಿ ಮಾಡಿಕೊಂಡು, ಬೆಳಿಗ್ಗೆನಿಂದಲೇ ಅಲಂಕಾರ ಹಾಗೂ ಅಡುಗೆ ಮಾಡುವ ಸಂಭ್ರಮ ಒಂದೆಡೆಯಾದರೆ, ಸಂಜೆ ಮುತೈದೆಯರನ್ನು ಮನೆಗೆ ಪೂಜೆಗೆ ಆಹ್ವಾನಿಸುವುದು ಇನ್ನೊಂದು ದೊಡ್ಡ ಸಂಭ್ರಮ. ಕೊರೊನಾ ಕಾರಣಕ್ಕೆ ಈ ಬಾರಿ ಮನೆಗೆ ಯಾರನ್ನೂ ಕರೆದಿಲ್ಲ. ಮನೆಗೆ ಬಂದಿದ್ದ ಸಂಬಂಧಿಕರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ವಿಜಯಲಕ್ಷ್ಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಕೊರೊನಾ ಸೋಂಕಿನ ಆತಂಕದ ನಡುವೆಯೂ ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮ ಕಂಡು ಬಂತು.</p>.<p>ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ ಪೂಜೆಯಂದು ಗೌರಿ ಮೂರ್ತಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಐದಾರು ತರಹದ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಈ ಮೊದಲು ಪ್ರತಿ ವರ್ಷ ಸಂಜೆ ಮುತೈದೆಯರನ್ನು ಮನೆಗೆ ಕರೆಯಿಸಿ ಅರಿಶಿಣ ಮತ್ತು ಕುಂಕುಮ ನೀಡುವ ಶಾಸ್ತ್ರ ಮಾಡಲಾಗುತ್ತಿತ್ತು. ಸೋಂಕಿನ ಭೀತಿ ಇರುವ ಕಾರಣ ಈ ವರ್ಷ ಹಬ್ಬದ ಆಚರಣೆ ಆಯಾ ಮನೆಗಳಿಗಷ್ಟೇ ಸೀಮಿತವಾಗಿತ್ತು.</p>.<p>ನಗರದ ದಾಜೀಬಾನ ಪೇಟೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಾಳೆ ದಿಂಡು ಕಟ್ಟಿ, ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆದರು. ಮನೆಗಳಲ್ಲಿಯೂ ಆಚರಣೆಯ ಸಡಗರ ಕಂಡು ಬಂತು.</p>.<p>ಮಾಸ್ಕ್ ಹಂಚಿಕೆ: ಸಾಂಪ್ರದಾಯಿಕ ಆಚರಣೆಯ ಜೊತೆಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಗೋಕುಲ ರಸ್ತೆಯಲ್ಲಿರುವ ಅಕ್ಷಯ ಪಾರ್ಕ್ನ ವಿಜಯಲಕ್ಷ್ಮಿ ಕಟ್ಟಿಮಠ ಅವರು ತಮ್ಮ ಮನೆಗೆ ಬಂದಿದ್ದವರಿಗೆ ಮಾಸ್ಕ್ ನೀಡಿದರು.</p>.<p>‘ವರಮಹಾಲಕ್ಷ್ಮಿ ಪೂಜೆಗೆ ಎರಡ್ಮೂರು ದಿನಗಳಿಂದ ತಯಾರಿ ಮಾಡಿಕೊಂಡು, ಬೆಳಿಗ್ಗೆನಿಂದಲೇ ಅಲಂಕಾರ ಹಾಗೂ ಅಡುಗೆ ಮಾಡುವ ಸಂಭ್ರಮ ಒಂದೆಡೆಯಾದರೆ, ಸಂಜೆ ಮುತೈದೆಯರನ್ನು ಮನೆಗೆ ಪೂಜೆಗೆ ಆಹ್ವಾನಿಸುವುದು ಇನ್ನೊಂದು ದೊಡ್ಡ ಸಂಭ್ರಮ. ಕೊರೊನಾ ಕಾರಣಕ್ಕೆ ಈ ಬಾರಿ ಮನೆಗೆ ಯಾರನ್ನೂ ಕರೆದಿಲ್ಲ. ಮನೆಗೆ ಬಂದಿದ್ದ ಸಂಬಂಧಿಕರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ವಿಜಯಲಕ್ಷ್ಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>