‘ದಿನ 2–3 ಸಾವಿರ ಮೊತ್ತದ ತರಕಾರಿ ತರುತ್ತೇನೆ. ಈಗ ನೀಡಿರುವ ಸಮಯ ಯಾವುದಕ್ಕೂ ಸಾಲುವುದಿಲ್ಲ. ಸಿಟಿ ಜನ ಬೆಳಿಗ್ಗೆ ಬೇಗ ಎದ್ದು ಬರುವುದಿಲ್ಲ. ತಂದ ಮಾಲು ಉಳಿಯುತ್ತಿದ್ದು, ನಾವು ಬದುಕುವುದಾದರೂ ಹೇಗೆ? ಈ ಹಿಂದೆ ದಿನಕ್ಕೆ ಕನಿಷ್ಠ ₹3 ಸಾವಿರ ವ್ಯಾಪಾರವಾಗುತ್ತಿತ್ತು, ಈಗ ಅರ್ಧವೂ ಆಗುತ್ತಿಲ್ಲ. ಅದರಲ್ಲೂ ತರಕಾರಿ ಉಳಿಯುವುದರಿಂದ ನಷ್ಟವಾಗುತ್ತಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ರವಿ.