ಮುಂಚಿನಿಂದಲೂ ಆಕಾಂಕ್ಷಿ:‘ಯಾರು ಸ್ಪರ್ಧಿಸಬೇಕೆಂದು ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತದೆ. ಲಾಡ್ ಅವರು ಬರುವುದಕ್ಕೆ ಮುಂಚಿನಿಂದಲೂ ನಾನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಜನರೊಂದಿಗೆ ಸಂಪರ್ಕದಲ್ಲಿದ್ದು ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ, ಟಿಕೆಟ್ ಬಯಸಿದ್ದೇನೆ. ಈ ಸಲ ಬೇಗನೇ ಟಿಕೆಟ್ ಘೋಷಣೆಯಾಗಲಿದ್ದು, ನಮ್ಮಿಬ್ಬರಲ್ಲಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂದು ಸದ್ಯದಲ್ಲೇ ಗೊತ್ತಾಗಲಿದೆ’ ಎಂದು ನಾಗರಾಜ ಛಬ್ಬಿ ಹೇಳಿದರು.