<p><strong>ಹುಬ್ಬಳ್ಳಿ</strong>: ಬ್ಯಾಂಕ್ ಸಿಬ್ಬಂದಿ ನಗುಮೊಗದಿಂದ ಜನಪರವಾಗಿ ಕೆಲಸ ಮಾಡಿದರೆ ಹೆಚ್ಚು ಗ್ರಾಹಕರು ಬರುತ್ತಾರೆ. ಇದರಿಂದ ಶಾಖೆ ವೇಗವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಎಸ್ವಿ ಪ್ರಸಾದ್ ಹೇಳಿದರು.</p>.<p>ನಗರದ ಕೇಶ್ವಾಪುರ ರಸ್ತೆಯ ನವೀನ್ ಪಾರ್ಕ್ನಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕ್ನ 887ನೇ ಶಾಖೆ ಹಾಗೂ ಮಿನಿ ಇ ಲಾಬಿ ಉದ್ಘಾಟಿಸಿ ಮಾತನಾಡಿದ ಅವರು ‘ನವೀನ್ ಪಾರ್ಕ್ ಬಡಾವಣೆಯಲ್ಲಿ ಸ್ಥಿತಿವಂತರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿನ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರಿಗೆ ಹೊಸ ಶಾಖೆಯಿಂದ ಅನುಕೂಲವಾಗುತ್ತದೆ. ಅವರ ಅಗತ್ಯಕ್ಕೆ ತಕ್ಕಂತೆ ಶಾಖೆ ಸೇವೆ ಒದಗಿಸಬೇಕು’ ಎಂದರು.</p>.<p>ಬ್ಯಾಂಕ್ ನಿರ್ದೇಶಕ ಕೇಶವ ಕೃಷ್ಣರಾವ್ ದೇಸಾಯಿ ಮಾತನಾಡಿ ‘ಇಲ್ಲಿನ ಶಾಖೆಯಲ್ಲಿ ಸದ್ಯಕ್ಕೆ ಒಂದು ಲಾಕರ್ ಸೌಲಭ್ಯ ಮಾತ್ರ ಇದ್ದು, ಇದನ್ನು ಮೂರಕ್ಕೆ ಹೆಚ್ಚಿಸಲಾಗುವುದು. ಕರ್ಣಾಟಕ ಬ್ಯಾಂಕ್ ಆರಂಭವಾಗಿ 2023–24ರಲ್ಲಿ ನೂರು ವರ್ಷ ಪೂರ್ಣಗೊಳಲಿದ್ದು, ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ವಾದಿರಾಜ ಮಾತನಾಡಿ ‘ಬ್ಯಾಂಕ್ ಭಾರತದ ಹೊರಗೂ ವಹಿವಾಟು ವಿಸ್ತರಿಸಿದೆ. ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಒಟ್ಟು ₹1,33,918 ಕೋಟಿ ವಹಿವಾಟು ಆಗಿದೆ. ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖೆಗಳ ಒಟ್ಟು ವ್ಯವಹಾರ ₹6,774 ಕೋಟಿ ವ್ಯವಹಾರವಾಗಿದೆ. ಅದರಲ್ಲಿ ಠೇವಣೆ ₹4,869 ಕೋಟಿ ಹಾಗೂ ಮುಂಗಡ ₹1,905 ಕೋಟಿ ಇದೆ. ಅವಳಿ ನಗರದ 16ನೇ ಶಾಖೆ ಇದಾಗಿದೆ’ ಎಂದು ತಿಳಿಸಿದರು.</p>.<p>ಶಾಖಾ ವ್ಯವಸ್ಥಾಪಕ ಗಣಪತಿ ಭಟ್ಟ, ದಿವಾಕರ, ಅರುಣ, ಗಿರೀಶ ಉಪಧ್ಯಾಯ, ರಮಣಮೂರ್ತಿ, ಅರವಿಂದ ಕಲಬುರ್ಗಿ, ನೇತ್ರಾವತಿ, ವಿದ್ಯಾವತಿ, ಶಾಂತಿಲಾಲ್ ಹಾಗೂ ರಜತ್ ಭಂಡಾರಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಬ್ಯಾಂಕ್ ಸಿಬ್ಬಂದಿ ನಗುಮೊಗದಿಂದ ಜನಪರವಾಗಿ ಕೆಲಸ ಮಾಡಿದರೆ ಹೆಚ್ಚು ಗ್ರಾಹಕರು ಬರುತ್ತಾರೆ. ಇದರಿಂದ ಶಾಖೆ ವೇಗವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಎಸ್ವಿ ಪ್ರಸಾದ್ ಹೇಳಿದರು.</p>.<p>ನಗರದ ಕೇಶ್ವಾಪುರ ರಸ್ತೆಯ ನವೀನ್ ಪಾರ್ಕ್ನಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕ್ನ 887ನೇ ಶಾಖೆ ಹಾಗೂ ಮಿನಿ ಇ ಲಾಬಿ ಉದ್ಘಾಟಿಸಿ ಮಾತನಾಡಿದ ಅವರು ‘ನವೀನ್ ಪಾರ್ಕ್ ಬಡಾವಣೆಯಲ್ಲಿ ಸ್ಥಿತಿವಂತರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿನ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರಿಗೆ ಹೊಸ ಶಾಖೆಯಿಂದ ಅನುಕೂಲವಾಗುತ್ತದೆ. ಅವರ ಅಗತ್ಯಕ್ಕೆ ತಕ್ಕಂತೆ ಶಾಖೆ ಸೇವೆ ಒದಗಿಸಬೇಕು’ ಎಂದರು.</p>.<p>ಬ್ಯಾಂಕ್ ನಿರ್ದೇಶಕ ಕೇಶವ ಕೃಷ್ಣರಾವ್ ದೇಸಾಯಿ ಮಾತನಾಡಿ ‘ಇಲ್ಲಿನ ಶಾಖೆಯಲ್ಲಿ ಸದ್ಯಕ್ಕೆ ಒಂದು ಲಾಕರ್ ಸೌಲಭ್ಯ ಮಾತ್ರ ಇದ್ದು, ಇದನ್ನು ಮೂರಕ್ಕೆ ಹೆಚ್ಚಿಸಲಾಗುವುದು. ಕರ್ಣಾಟಕ ಬ್ಯಾಂಕ್ ಆರಂಭವಾಗಿ 2023–24ರಲ್ಲಿ ನೂರು ವರ್ಷ ಪೂರ್ಣಗೊಳಲಿದ್ದು, ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.</p>.<p>ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ವಾದಿರಾಜ ಮಾತನಾಡಿ ‘ಬ್ಯಾಂಕ್ ಭಾರತದ ಹೊರಗೂ ವಹಿವಾಟು ವಿಸ್ತರಿಸಿದೆ. ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಒಟ್ಟು ₹1,33,918 ಕೋಟಿ ವಹಿವಾಟು ಆಗಿದೆ. ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖೆಗಳ ಒಟ್ಟು ವ್ಯವಹಾರ ₹6,774 ಕೋಟಿ ವ್ಯವಹಾರವಾಗಿದೆ. ಅದರಲ್ಲಿ ಠೇವಣೆ ₹4,869 ಕೋಟಿ ಹಾಗೂ ಮುಂಗಡ ₹1,905 ಕೋಟಿ ಇದೆ. ಅವಳಿ ನಗರದ 16ನೇ ಶಾಖೆ ಇದಾಗಿದೆ’ ಎಂದು ತಿಳಿಸಿದರು.</p>.<p>ಶಾಖಾ ವ್ಯವಸ್ಥಾಪಕ ಗಣಪತಿ ಭಟ್ಟ, ದಿವಾಕರ, ಅರುಣ, ಗಿರೀಶ ಉಪಧ್ಯಾಯ, ರಮಣಮೂರ್ತಿ, ಅರವಿಂದ ಕಲಬುರ್ಗಿ, ನೇತ್ರಾವತಿ, ವಿದ್ಯಾವತಿ, ಶಾಂತಿಲಾಲ್ ಹಾಗೂ ರಜತ್ ಭಂಡಾರಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>