<p><strong>ಹುಬ್ಬಳ್ಳಿ:</strong> ಜರ್ಮನಿಯಲ್ಲಿ ನಡೆಯಲಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಂಡ ಶುಕ್ರವಾರ ಪ್ರಯಾಣ ಬೆಳೆಸಿತು. </p>.<p>ಕರ್ನಾಟಕದ ಎಂಟು ಸೇರಿದಂತೆ 18 ಕ್ರೀಡಾಪಟುಗಳು ಭಾರತ ತಂಡದಲ್ಲಿದ್ದಾರೆ. ರಾಜ್ಯದ ಆಟಗಾರರು ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ಇನ್ನುಳಿದ ರಾಷ್ಟ್ರೀಯ ತಂಡದ ಆಟಗಾರರ ಜೊತೆಗೂಡಿ ಜರ್ಮಿನಿಗೆ ಪ್ರಯಾಣ ಬೆಳೆಸಿದರು. ಆಗಸ್ಟ್ 5 ರವರೆಗೆ ಕ್ರೀಡಾಕೂಟ ನಡೆಯಲಿದೆ.</p>.<p>'ವೀಸಾ ಸಮಸ್ಯೆಯಿಂದಾಗಿ ತಡವಾಗಿ ಜರ್ಮನಿ ತಲುಪಿದೆವು. ಇದರಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿವೆ' ಭಾರತ ತಂಡದ ವ್ಯವಸ್ಥಾಪಕ ಶಿವಾನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕರ್ನಾಟಕದ ಕ್ರೀಡಾಪಟುಗಳು: ದೇವಪ್ಪ ಮೋರೆ (ಧಾರವಾಡ ಜಿಲ್ಲೆ), ನಾಗೇಶ ಕದ್ರಿಪುರ (ಕೋಲಾರ ಜಿಲ್ಲೆ), ಪ್ರಕಾಶ್ ಎಂ. (ಬೆಂಗಳೂರು), ಮಂಜುಳಾ ಗೊರಗುದ್ದಿ ಚಿಕ್ಕನಂದಿ (ಬೆಳಗಾವಿ ಜಿಲ್ಲೆ), ಮಧುಸೂದನ ಡಿ. (ಮೈಸೂರು), ತುಳಸಿದರ ಜಿ.ಎಚ್. (ಬೆಂಗಳೂರು), ಶಾಂತಕುಮಾರ್ ಕೆ.ಆರ್.ಕೊಳ್ಳಂಗಿ (ಹಾಸನ ಜಿಲ್ಲೆ) ಮತ್ತು ಸಿ.ವಿ.ರಾಜಣ್ಣ (ಬೆಂಗಳೂರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಜರ್ಮನಿಯಲ್ಲಿ ನಡೆಯಲಿರುವ ಕುಬ್ಜರ ಎಂಟನೇ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಂಡ ಶುಕ್ರವಾರ ಪ್ರಯಾಣ ಬೆಳೆಸಿತು. </p>.<p>ಕರ್ನಾಟಕದ ಎಂಟು ಸೇರಿದಂತೆ 18 ಕ್ರೀಡಾಪಟುಗಳು ಭಾರತ ತಂಡದಲ್ಲಿದ್ದಾರೆ. ರಾಜ್ಯದ ಆಟಗಾರರು ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ಇನ್ನುಳಿದ ರಾಷ್ಟ್ರೀಯ ತಂಡದ ಆಟಗಾರರ ಜೊತೆಗೂಡಿ ಜರ್ಮಿನಿಗೆ ಪ್ರಯಾಣ ಬೆಳೆಸಿದರು. ಆಗಸ್ಟ್ 5 ರವರೆಗೆ ಕ್ರೀಡಾಕೂಟ ನಡೆಯಲಿದೆ.</p>.<p>'ವೀಸಾ ಸಮಸ್ಯೆಯಿಂದಾಗಿ ತಡವಾಗಿ ಜರ್ಮನಿ ತಲುಪಿದೆವು. ಇದರಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿವೆ' ಭಾರತ ತಂಡದ ವ್ಯವಸ್ಥಾಪಕ ಶಿವಾನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕರ್ನಾಟಕದ ಕ್ರೀಡಾಪಟುಗಳು: ದೇವಪ್ಪ ಮೋರೆ (ಧಾರವಾಡ ಜಿಲ್ಲೆ), ನಾಗೇಶ ಕದ್ರಿಪುರ (ಕೋಲಾರ ಜಿಲ್ಲೆ), ಪ್ರಕಾಶ್ ಎಂ. (ಬೆಂಗಳೂರು), ಮಂಜುಳಾ ಗೊರಗುದ್ದಿ ಚಿಕ್ಕನಂದಿ (ಬೆಳಗಾವಿ ಜಿಲ್ಲೆ), ಮಧುಸೂದನ ಡಿ. (ಮೈಸೂರು), ತುಳಸಿದರ ಜಿ.ಎಚ್. (ಬೆಂಗಳೂರು), ಶಾಂತಕುಮಾರ್ ಕೆ.ಆರ್.ಕೊಳ್ಳಂಗಿ (ಹಾಸನ ಜಿಲ್ಲೆ) ಮತ್ತು ಸಿ.ವಿ.ರಾಜಣ್ಣ (ಬೆಂಗಳೂರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>