ಭದ್ರಾವತಿ ತಾಲ್ಲೂಕಿನ ಕೆಂಚನಹಳ್ಳಿ ಕಾಲೊನಿಯಲ್ಲಿ ವಾಸ ಮಾಡುತ್ತಿದ್ದ ದತ್ತಾತ್ರೇಯ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದರು. 10 ಗಂಟೆ ವೇಳೆಗೆ ಪತ್ನಿ ಅನಸೂಯಗೆ ದೂರವಾಣಿ ಕರೆ ಮಾಡಿ, ತಾನು ಮುಡಬ ಸೇತುವೆ ಸಮೀಪದಲ್ಲಿದ್ದು, ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಗಾಬರಿಯಿಂದ ಪತ್ನಿ ಹಾಗೂ ಮಕ್ಕಳು ಅಲ್ಲಿಗೆ ಬಂದಾಗ ಸೇತುವೆ ಕೆಳಗೆ ತುಂಗಾನದಿಯ ದಡದಲ್ಲಿ ದತ್ತಾತ್ರೇಯ ಅವರ ಮೃತದೇಹ ಪತ್ತೆಯಾಗಿದೆ. ಮುಡಬ ಸೇತುವೆಯು ನರಸಿಂಹರಾಜಪುರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿದೆ.