<p><strong>ಶಿರಹಟ್ಟಿ</strong>: ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ತೋಟವೊಂದರ ಮೀನು ಸಾಕಾಣಿಕೆ ತೊಟ್ಟಿಗೆ ವಿಷ ಮಿಶ್ರಣದ ಶಂಕೆ ಇದ್ದು,ಕಾಟ್ಲಾ ಸೇರಿದಂತೆ ವಿವಿಧ ತಳಿಯ 5 ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತಿವೆ.</p>.<p>ಗ್ರಾಮದ ರೈತ ಪ್ರಸಾದ ಆಡಿನ ಅವರಿಗೆ ಸೇರಿದ ಮೀನು ಸಾಕಾಣಿಕೆ ಕೇಂದ್ರ ಇದಾಗಿದ್ದು, ಸಮಗ್ರ ಕೃಷಿಯೊಂದಿಗೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ತೋಟದಲ್ಲಿ 2 ದೊಡ್ಡ ತೊಟ್ಟಿ ನಿರ್ಮಿಸಿ ಅದರಲ್ಲಿ 5 ಸಾವಿರ ಮೀನು ಮರಿಗಳನ್ನು ಬಿಡಲಾಗಿತ್ತು. ಸದ್ಯ ಮೀನು ಮರಿಗಳ ನಿಗೂಢ ಸಾವಿನಿಂದ ಆತಂಕಗೊಂಡಿದ್ದಾರೆ.</p>.<p>ಹೊಸಪೇಟೆಯಲ್ಲಿ ಒಂದು ಮೀನು ಮರಿಗೆ ₹2 ಕೊಟ್ಟು ಖರೀದಿಸಿ ಸುಮಾರು 4 ತಿಂಗಳಿನಿಂದ ಅದಕ್ಕೆ ನಿತ್ಯ ಆಹಾರ ಹಾಕಿ ಸಾಕಾಣಿಕೆ ಮಾಡುತ್ತಿದ್ದರು. ಮೀನು ಕೃಷಿಯಿಂದ ಉತ್ತಮ ಆದಾಯ ಗಳಿಕೆಯ ನಿರೀಕ್ಷೆಯಲ್ಲಿದ್ದ ರೈತ ಪ್ರಸಾದ ಆಡಿನ ಈಗ ಸಂಕಷ್ಟದಲ್ಲಿದ್ದಾರೆ.</p>.<p>‘ನಮ್ಮ ಏಳಿಗೆ ಸಹಿಸದ ಕೆಲ ಕಿಡಿಗೇಡಿಗಳು ಈ ಕೆಲಸ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ. ಮೀನು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಷ್ಟ ಪರಿಹಾರಕ್ಕೆ ಮನವಿ ಮಾಡುತ್ತೇನೆ’ ಎಂದು ರೈತ ಪ್ರಸಾದ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಹಟ್ಟಿ</strong>: ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ತೋಟವೊಂದರ ಮೀನು ಸಾಕಾಣಿಕೆ ತೊಟ್ಟಿಗೆ ವಿಷ ಮಿಶ್ರಣದ ಶಂಕೆ ಇದ್ದು,ಕಾಟ್ಲಾ ಸೇರಿದಂತೆ ವಿವಿಧ ತಳಿಯ 5 ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತಿವೆ.</p>.<p>ಗ್ರಾಮದ ರೈತ ಪ್ರಸಾದ ಆಡಿನ ಅವರಿಗೆ ಸೇರಿದ ಮೀನು ಸಾಕಾಣಿಕೆ ಕೇಂದ್ರ ಇದಾಗಿದ್ದು, ಸಮಗ್ರ ಕೃಷಿಯೊಂದಿಗೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ತೋಟದಲ್ಲಿ 2 ದೊಡ್ಡ ತೊಟ್ಟಿ ನಿರ್ಮಿಸಿ ಅದರಲ್ಲಿ 5 ಸಾವಿರ ಮೀನು ಮರಿಗಳನ್ನು ಬಿಡಲಾಗಿತ್ತು. ಸದ್ಯ ಮೀನು ಮರಿಗಳ ನಿಗೂಢ ಸಾವಿನಿಂದ ಆತಂಕಗೊಂಡಿದ್ದಾರೆ.</p>.<p>ಹೊಸಪೇಟೆಯಲ್ಲಿ ಒಂದು ಮೀನು ಮರಿಗೆ ₹2 ಕೊಟ್ಟು ಖರೀದಿಸಿ ಸುಮಾರು 4 ತಿಂಗಳಿನಿಂದ ಅದಕ್ಕೆ ನಿತ್ಯ ಆಹಾರ ಹಾಕಿ ಸಾಕಾಣಿಕೆ ಮಾಡುತ್ತಿದ್ದರು. ಮೀನು ಕೃಷಿಯಿಂದ ಉತ್ತಮ ಆದಾಯ ಗಳಿಕೆಯ ನಿರೀಕ್ಷೆಯಲ್ಲಿದ್ದ ರೈತ ಪ್ರಸಾದ ಆಡಿನ ಈಗ ಸಂಕಷ್ಟದಲ್ಲಿದ್ದಾರೆ.</p>.<p>‘ನಮ್ಮ ಏಳಿಗೆ ಸಹಿಸದ ಕೆಲ ಕಿಡಿಗೇಡಿಗಳು ಈ ಕೆಲಸ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ. ಮೀನು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಷ್ಟ ಪರಿಹಾರಕ್ಕೆ ಮನವಿ ಮಾಡುತ್ತೇನೆ’ ಎಂದು ರೈತ ಪ್ರಸಾದ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>