<p><strong>ಲಕ್ಷ್ಮೇಶ್ವರ:</strong> ಗ್ರಾಮೀಣ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ‘ಶ್ರಾವಣ ಸಿರಿ- ಸಿಹಿ ಭೋಜನ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ.</p>.<p>ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿಪದಾರ್ಥ ನೀಡಲಾಯಿತು. ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೂ 125 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈ ವಿನೂತನ ಯೋಜನೆಯಿಂದ ಸಂತಸಗೊಂಡಿದ್ದಾರೆ.</p>.<p>ಎಸ್ಡಿಎಂಸಿ ಸದಸ್ಯರ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಪ್ರತಿದಿನ ಜಿಲೇಬಿ, ಬೂಂದಿ, ಮೈಸೂರು ಪಾಕ್, ಶಾವಿಗೆ ಪಾಯಸ, ಕೇಸರಿಬಾತ್, ಹೋಳಿಗೆ, ಗೋಧಿ ಹುಗ್ಗಿ ವಿತರಿಸಲಾಯಿತು. </p>.<p>ಈ ಯೋಜನೆ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಗೈರಾಗದೆ ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದರು. ಮುಂದಿನ ದಿನಗಳಲ್ಲೂ ಯೋಜನೆ ಮುಂದುವರಿಸಿಕೊಂಡು ಹೋಗುವ ಯೋಜನೆ ಶಾಲೆಯ ಶಿಕ್ಷಕರದ್ದಾಗಿದೆ.</p>.<p>‘ಅನೇಕ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದ ಕಾರಣ ಶಿಕ್ಷಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಸಿಹಿ ಪದಾರ್ಥ ನೀಡಲು ದಿನವೊಂದಕ್ಕೆ ₹1,500ರಿಂದ ₹2,000 ಖರ್ಚಾಗುತ್ತಿತ್ತು. ಗ್ರಾಮಸ್ಥರು ಆರ್ಥಿಕ ನೆರವು ನೀಡಿದ್ದರಿಂದ ಈ ಯೋಜನೆ ಯಶಸ್ವಿಯಾಗಿದೆ. ಪ್ರತಿಯೊಂದೂ ಗ್ರಾಮಗಳಲ್ಲಿ ಈ ರೀತಿಯ ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಬಹುದು’ ಎನ್ನುತ್ತಾರೆ ಬಿಇಒ ಜಿ.ಎಂ.ಮುಂದಿನಮನಿ.</p>.<div><blockquote>ತಾಲ್ಲೂಕಿನ ಸೋಗಿವಾಳ ಹಿರೇಮಲ್ಲಾಪೂರ ಲಕ್ಷ್ಮೇಶ್ವರದ ಪ್ರೌಢಶಾಲೆಗಳಲ್ಲಿಯೂ ಸಿಹಿಯೂಟ ಭೋಜನ ನೀಡಲಾಗುತ್ತಿದೆ. ಇದು ಮಾದರಿ ಯೋಜನೆಯಾಗಿದೆ </blockquote><span class="attribution">– ಎಚ್.ಎಸ್.ರಾಮನಗೌಡ, ತಾಲ್ಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ:</strong> ಗ್ರಾಮೀಣ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ‘ಶ್ರಾವಣ ಸಿರಿ- ಸಿಹಿ ಭೋಜನ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ.</p>.<p>ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿಪದಾರ್ಥ ನೀಡಲಾಯಿತು. ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೂ 125 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈ ವಿನೂತನ ಯೋಜನೆಯಿಂದ ಸಂತಸಗೊಂಡಿದ್ದಾರೆ.</p>.<p>ಎಸ್ಡಿಎಂಸಿ ಸದಸ್ಯರ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಪ್ರತಿದಿನ ಜಿಲೇಬಿ, ಬೂಂದಿ, ಮೈಸೂರು ಪಾಕ್, ಶಾವಿಗೆ ಪಾಯಸ, ಕೇಸರಿಬಾತ್, ಹೋಳಿಗೆ, ಗೋಧಿ ಹುಗ್ಗಿ ವಿತರಿಸಲಾಯಿತು. </p>.<p>ಈ ಯೋಜನೆ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಗೈರಾಗದೆ ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದರು. ಮುಂದಿನ ದಿನಗಳಲ್ಲೂ ಯೋಜನೆ ಮುಂದುವರಿಸಿಕೊಂಡು ಹೋಗುವ ಯೋಜನೆ ಶಾಲೆಯ ಶಿಕ್ಷಕರದ್ದಾಗಿದೆ.</p>.<p>‘ಅನೇಕ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದ ಕಾರಣ ಶಿಕ್ಷಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಸಿಹಿ ಪದಾರ್ಥ ನೀಡಲು ದಿನವೊಂದಕ್ಕೆ ₹1,500ರಿಂದ ₹2,000 ಖರ್ಚಾಗುತ್ತಿತ್ತು. ಗ್ರಾಮಸ್ಥರು ಆರ್ಥಿಕ ನೆರವು ನೀಡಿದ್ದರಿಂದ ಈ ಯೋಜನೆ ಯಶಸ್ವಿಯಾಗಿದೆ. ಪ್ರತಿಯೊಂದೂ ಗ್ರಾಮಗಳಲ್ಲಿ ಈ ರೀತಿಯ ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಬಹುದು’ ಎನ್ನುತ್ತಾರೆ ಬಿಇಒ ಜಿ.ಎಂ.ಮುಂದಿನಮನಿ.</p>.<div><blockquote>ತಾಲ್ಲೂಕಿನ ಸೋಗಿವಾಳ ಹಿರೇಮಲ್ಲಾಪೂರ ಲಕ್ಷ್ಮೇಶ್ವರದ ಪ್ರೌಢಶಾಲೆಗಳಲ್ಲಿಯೂ ಸಿಹಿಯೂಟ ಭೋಜನ ನೀಡಲಾಗುತ್ತಿದೆ. ಇದು ಮಾದರಿ ಯೋಜನೆಯಾಗಿದೆ </blockquote><span class="attribution">– ಎಚ್.ಎಸ್.ರಾಮನಗೌಡ, ತಾಲ್ಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>