<p><strong>ಗದಗ</strong>: ‘ಬಸವತತ್ವ ಪ್ರಸಾರಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ನಡೆ-ನುಡಿಗಳಲ್ಲಿ ಒಂದೇ ಆಗಿದ್ದರು. ಸ್ವಾಮಿತ್ವಕ್ಕೆ ಘನತೆ ತಂದುಕೊಟ್ಟ ಶ್ರೇಷ್ಠ ಸಂತ ಅವರು’ ಎಂದು ಶರಣ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.</p>.<p>ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಆರನೇ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. </p>.<p>‘ಸಿದ್ಧಲಿಂಗ ಶ್ರೀಗಳ ಮೇಲೆ ನನಗೆ ಇದ್ದ ಅಪಾರ ಗೌರವ ಹಾಗೂ ಭಕ್ತಿಯ ಕಾರಣವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಂಡೆ’ ಎಂದರು.</p>.<p>‘ಸದ್ಭಕ್ತಿ-ಸದಾಚಾರ-ವಿನಯದ ಸಾಕಾರಮೂರ್ತಿಗಳಾಗಿದ್ದ ಶ್ರೀಗಳು ಶ್ರಮಿಕರು, ದೀನ ದಲಿತರ ತಲ್ಲಣಗಳಿಗೆ ನಿರಂತರ ಸ್ಪಂದಿಸುತ್ತಿದ್ದರು. ಅಂಥ ಮಹಾಚೇತನದ ಸಂಪರ್ಕ ನನಗೆ ಇತ್ತು ಎಂಬುದೇ ಪುಣ್ಯವಾಗಿದೆ. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವೆ’ ಎಂದರು.</p>.<p>ಪ್ರಶಸ್ತಿ ಪ್ರದಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಗೊ.ರು.ಚನ್ನಬಸಪ್ಪ ಅವರ ಬಸವತತ್ವ ಪ್ರಸಾರ ಹಾಗೂ ಕನ್ನಡದ ಕೈಂಕರ್ಯಗಳನ್ನು ಸಮೀಪದಿಂದ ನೋಡಿರುವ ನನಗೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲು ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದರು.</p>.<p>‘ಶರಣ ಸಾಹಿತ್ಯವನ್ನು ಮನೆ ಮನಕ್ಕೆ ತಲುಪಿಸಲು ಅಪಾರ ಶ್ರಮಿಸಿರುವ ಗೊ.ರು.ಚನ್ನಬಸಪ್ಪ ಅವರು ಈ ಹಿಂದೆ ನಮ್ಮ ಕೋರಿಕೆ ಮೇರೆಗೆ ಭಾಷಾ ಆಯೋಗದ ಮುಖ್ಯಸ್ಥರಾಗಿ ಕೇಂದ್ರದ ಕಾನೂನುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.</p>.<p>‘ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಜಾನಪದ ವಿಶ್ವವಿದ್ಯಾಲಯದ ಮೂಲಕ ಕರ್ನಾಟಕದ ಎಲ್ಲಾ ಗ್ರಾಮಗಳ ಇತಿಹಾಸವುಳ್ಳ ‘ಗ್ರಾಮ ಚರಿತೆ’ ಗ್ರಂಥಗಳನ್ನು ಪ್ರಕಟಿಸಬೇಕು ಎಂದು ಗೊ.ರು.ಚನ್ನಬಸಪ್ಪನವರು ಸಲಹೆ ನೀಡಿದ್ದರು. ಆ ಪ್ರಕಾರ ಅಂದು ನಮ್ಮ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿತು. ಸಾಮಾಜಿಕ ಚಿಂತನೆಯುಳ್ಳವರಾಗಿದ್ದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿಗೆ ಗೊ.ರು ಚನ್ನಬಸಪ್ಪ ಸೂಕ್ತ ಆಯ್ಕೆಯಾಗಿದ್ದು, ಅವರಿಂದ ಪ್ರಶಸ್ತಿಯ ತೂಕ ಇನ್ನೂ ಹೆಚ್ಚಾಗಿದೆ’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ ಶ್ರೇಷ್ಠ ಸಂದೇಶಗಳು ಹಾಗೂ ಸತ್ಕಾರ್ಯಗಳ ಮೂಲಕ ಅಜರಾಮರವಾಗಿದ್ದಾರೆ. ಗಂಧದ ಕೊರಡಿನಂತೆ, ದೀಪದ ಬೆಳಕಿನಂತೆ ಜನಕಲ್ಯಾಣಕ್ಕಾಗಿ ಶ್ರಮಿಸಿದ್ದ ಶ್ರೀಗಳು ಬಸವತತ್ವವನ್ನು ಜನರಿಗೆ ತಲುಪಿಸಲು ಅವಿರತ ಶ್ರಮ ವಹಿಸಿದರು’ ಎಂದು ತಿಳಿಸಿದರು.</p>.<p>‘ಪುಸ್ತಕ ಪ್ರಕಟಣೆ, ನಿರಂತರ ಶಿವಾನುಭವ ಕಾರ್ಯಕ್ರಮಗಳು, ಕಪ್ಪತ್ತಗುಡ್ಡ ರಕ್ಷಣೆ ಹೀಗೆ ಶ್ರೀಗಳ ಸಾಧನೆಯ ಮಜಲುಗಳು ಹಲವಾರು ಇದ್ದು, ಅವರ ಅಗಲಿಕೆ ನಂತರ ತೋಂಟದಾರ್ಯ ವಿದ್ಯಾಪೀಠದ ಕೆಲವು ನೌಕರರು ಹಾಗೂ ಪತ್ತಿನ ಸಂಘದ ಆದಾಯದಲ್ಲಿ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.</p>.<p>ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಪ್ಪತಗುಡ್ಡ ಹೋರಾಟವನ್ನು ಕೈಗೆತ್ತಿಕೊಳ್ಳದಿದ್ದರೆ ಇಂದು ಕಪ್ಪತ್ತಗುಡ್ಡ ಉಳಿಯುತ್ತಿರಲಿಲ್ಲ. ಶುದ್ಧ ಗಾಳಿ ನೀಡುವ ತಾಣ ಎಂಬ ಹಿರಿಮೆ ಪಡೆಯುತ್ತಿರಲಿಲ್ಲ. ಶಾಸಕನಾಗಿದ್ದಾಗ ಕೈಗೊಂಡ ಅನೇಕ ಕೆಲಸಗಳನ್ನು ವಿಶೇಷವಾಗಿ ಪರಿಸರಕ್ಕೆ ಸಂಬಂಧಪಟ್ಟ, ಕೆರೆ ತುಂಬಿಸುವ ಕಾರ್ಯಗಳನ್ನು ಶ್ರೀಗಳು ಶ್ಲಾಘಿಸುತ್ತಿದ್ದರು’ ಎಂದರು.</p>.<p>ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ಶ್ರೀಗಳು ನಾನು ಕಲಿತ ದಿಂಡೂರ ಶಾಲೆಗೆ ಆ ಕಾಲದಲ್ಲಿ ₹1 ಲಕ್ಷ ಖರ್ಚು ಮಾಡಿ ಶಾಲೆ ಅಭಿವೃದ್ಧಿಪಡಿಸಿದರು. ಅವರ ಡಂಬಳ ಶಾಲೆಯಲ್ಲಿ ನಾನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಾಗ ನಮ್ಮ ತಾಂಡಾದ ವಿದ್ಯಾರ್ಥಿಗಳಿಗೆ ಅಂತಃಕರಣದಿಂದ ತಾಯಿಯಂತೆ ಉಣಬಡಿಸುತ್ತಿದ್ದರು. ಅವರು ನಮ್ಮ ಜನಾಂಗದ ಬಗ್ಗೆ ಹೊಂದಿದ್ದ ಪ್ರೀತಿ ಸದಾ ಸ್ಮರಣೀಯ’ ಎಂದರು.</p>.<p>ಅತಿಥಿಗಳಾಗಿ ಪಾಲ್ಗೊಂಡಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಡಿ.ಕುಂಬಾರ ಮಾತನಾಡಿ, ‘ಲಿಂ. ಸಿದ್ಧಲಿಂಗ ಶ್ರೀಗಳು ನಾನು ಹುಟ್ಟಿದ ವಿಜಯಪುರ ಜಿಲ್ಲೆಯವರು ಎಂಬುದು ನನಗೆ ಅಭಿಮಾನ ಎನಿಸುತ್ತದೆ. ಗದಗ ಪೀಠಕ್ಕೆ ಅವರು ಪದಾರ್ಪಣೆ ಮಾಡುವಾಗ ನಾನು ಈ ಮಠದ ಶ್ರೀಮಂತಿಕೆಯನ್ನಲ್ಲ ಬದಲಿಗೆ ಭಕ್ತರ ಹೃದಯ ಶ್ರೀಮಂತಿಕೆ ನೋಡಿ ಈ ಮಠಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು. ಗೋಕಾಕ್ ವರದಿ ಜಾರಿಗಾಗಿ ನಡೆದ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಶ್ರೀಗಳು ನಾಡು-ನುಡಿಗಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ’ ಎಂದರು.</p>.<p>ಮುದೇನಗುಡಿ ಅಡವಿಸಿದ್ಧೇಶ್ವರಮಠದ ನಿರುಪಾಧೀಶ್ವರ ಸ್ವಾಮೀಜಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಳಂದದ ಕೋರಣೇಶ್ವರ ಸ್ವಾಮೀಜಿ, ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಅರಸಿಕೇರಿ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಶಾಸಕ ಜಿ.ಎಸ್.ಪಾಟೀಲ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಕೆ.ಎಚ್.ಬೇಲೂರ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ವೇದಿಕೆಯಲ್ಲಿದ್ದರು.</p>.<p>ತೋಂಟದ ಸಿದ್ಧಲಿಂಗ ಶ್ರೀಗಳ ಸಾವಿರಾರು ಭಕ್ತರು-ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<p>‘ವಿಶ್ವವಿದ್ಯಾಲಯಗಳ ಉಳಿವಿಗೆ ಧ್ವನಿ ಎತ್ತಿ’</p><p>‘ನಾಡಿನ ಸಾಹಿತಿಗಳು ಮಠಾಧೀಶರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪರ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಉಳಿವಿಗೆ ಧ್ವನಿ ಎತ್ತಬೇಕು. ನೀವು ಧ್ವನಿ ಎತ್ತಿದರೆ ಮಾತ್ರ ನಾವು ಆಡಳಿತಾತ್ಮಕ ರಾಜಕೀಯ ನಿರ್ಣಯ ಕೈಗೊಳ್ಳಲು ಸಾಧ್ಯ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಜಾನಪದ ವಿಶ್ವವಿದ್ಯಾಲಯ ಗೊರುಚ ಅವರ ಕನಸಿನ ಕೂಸು. ಆದರೆ ಅದು ಆರ್ಥಿಕವಾಗಿ ಇನ್ನೂ ಸದೃಢವಾಗಿಲ್ಲ. ಅದು ಗೊರುಚ ಅವರ ಮಾನಸಿಕ ಶಕ್ತಿಯಂತೆ ಇನ್ನಷ್ಟು ದೃಢವಾಗಿ ಬೆಳೆಯಬೇಕಿದೆ ಎಂದು ಹೇಳಿದರು. ‘ತನ್ನದೇ ಪರಂಪರೆ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಸದ್ಯದ ಸ್ಥಿತಿ ಕೂಡ ಉತ್ತಮವಾಗಿಲ್ಲ. ಈ ವಿಶ್ವವಿದ್ಯಾಲಯದ ವಾರ್ಷಿಕ ಬಜೆಟ್ ₹82 ಕೋಟಿ. ಆದರೆ ಅಲ್ಲಿಂದ ನಿವೃತ್ತರಾದ ನೌಕರರಿಗೆ ಪಿಂಚಣಿ ಕೊಡಲು ₹120 ಕೋಟಿ ಬೇಕಿದೆ. ಹೀಗಾಗಿ ಈ ವಿಶ್ವವಿದ್ಯಾಲಯದ ಗ್ರಾಫ್ ಇಳಿಮುಖವಾಗುತ್ತಿದೆ’ ಎಂದು ಬೇಸರಿಸಿದರು. ‘ವಿಶ್ವವಿದ್ಯಾಲಯಗಳ ಉಳಿವಿಗಾಗಿ ಜನರು ಧ್ವನಿ ಎತ್ತಬೇಕು. ಸಮಾಜ ಮೌನವಾದರೆ ಶೈಕ್ಷಣಿಕ ಸಂಸ್ಥೆಗಳು ಅವನತಿಯ ಹಾದಿ ಹಿಡಿಯುತ್ತವೆ. ಈ ನಿಟ್ಟಿನಲ್ಲಿ ಗೊರುಚ ಅವರಂತಹ ತಜ್ಞರು ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.</p>.<p>‘ಹಲವು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ</p><p> ‘ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಕುರಿತಾಗಿ ಸದನದಲ್ಲಿ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ ಯಾವ ಸರ್ಕಾರಗಳೂ ಈ ಬಗ್ಗೆ ಕ್ರಮವಹಿಸಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು. ‘ಈ ವಿಷಯವಾಗಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಪ್ರಸ್ತುತ ಸಿಎಂ ಆಗಿರುವ ಸಿದ್ದರಾಮಯ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗದಿದ್ದರೆ ಹೋಗಲಿ ಅಲ್ಲಿನ ನೌಕರರು ಹಾಗೂ ನಿವೃತ್ತದಾರರಿಗೆ ಪಿಂಚಣಿ ಕೊಡುವಷ್ಟಾದರೂ ಹಣ ಬಿಡುಗಡೆ ಮಾಡಬೇಕು. ವ್ಯಕ್ತಿ ಸಮಾಜ ದೇಶ ನಿರ್ಮಾಣ ಹಾಗೂ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವವಿದ್ಯಾಲಯಗಳ ಉಳಿವಿಗೆ ಸರ್ಕಾರಗಳು ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ಬಸವತತ್ವ ಪ್ರಸಾರಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ನಡೆ-ನುಡಿಗಳಲ್ಲಿ ಒಂದೇ ಆಗಿದ್ದರು. ಸ್ವಾಮಿತ್ವಕ್ಕೆ ಘನತೆ ತಂದುಕೊಟ್ಟ ಶ್ರೇಷ್ಠ ಸಂತ ಅವರು’ ಎಂದು ಶರಣ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.</p>.<p>ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಆರನೇ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. </p>.<p>‘ಸಿದ್ಧಲಿಂಗ ಶ್ರೀಗಳ ಮೇಲೆ ನನಗೆ ಇದ್ದ ಅಪಾರ ಗೌರವ ಹಾಗೂ ಭಕ್ತಿಯ ಕಾರಣವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಂಡೆ’ ಎಂದರು.</p>.<p>‘ಸದ್ಭಕ್ತಿ-ಸದಾಚಾರ-ವಿನಯದ ಸಾಕಾರಮೂರ್ತಿಗಳಾಗಿದ್ದ ಶ್ರೀಗಳು ಶ್ರಮಿಕರು, ದೀನ ದಲಿತರ ತಲ್ಲಣಗಳಿಗೆ ನಿರಂತರ ಸ್ಪಂದಿಸುತ್ತಿದ್ದರು. ಅಂಥ ಮಹಾಚೇತನದ ಸಂಪರ್ಕ ನನಗೆ ಇತ್ತು ಎಂಬುದೇ ಪುಣ್ಯವಾಗಿದೆ. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವೆ’ ಎಂದರು.</p>.<p>ಪ್ರಶಸ್ತಿ ಪ್ರದಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಗೊ.ರು.ಚನ್ನಬಸಪ್ಪ ಅವರ ಬಸವತತ್ವ ಪ್ರಸಾರ ಹಾಗೂ ಕನ್ನಡದ ಕೈಂಕರ್ಯಗಳನ್ನು ಸಮೀಪದಿಂದ ನೋಡಿರುವ ನನಗೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲು ಹೆಮ್ಮೆ ಎನಿಸುತ್ತದೆ’ ಎಂದು ಹೇಳಿದರು.</p>.<p>‘ಶರಣ ಸಾಹಿತ್ಯವನ್ನು ಮನೆ ಮನಕ್ಕೆ ತಲುಪಿಸಲು ಅಪಾರ ಶ್ರಮಿಸಿರುವ ಗೊ.ರು.ಚನ್ನಬಸಪ್ಪ ಅವರು ಈ ಹಿಂದೆ ನಮ್ಮ ಕೋರಿಕೆ ಮೇರೆಗೆ ಭಾಷಾ ಆಯೋಗದ ಮುಖ್ಯಸ್ಥರಾಗಿ ಕೇಂದ್ರದ ಕಾನೂನುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.</p>.<p>‘ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಜಾನಪದ ವಿಶ್ವವಿದ್ಯಾಲಯದ ಮೂಲಕ ಕರ್ನಾಟಕದ ಎಲ್ಲಾ ಗ್ರಾಮಗಳ ಇತಿಹಾಸವುಳ್ಳ ‘ಗ್ರಾಮ ಚರಿತೆ’ ಗ್ರಂಥಗಳನ್ನು ಪ್ರಕಟಿಸಬೇಕು ಎಂದು ಗೊ.ರು.ಚನ್ನಬಸಪ್ಪನವರು ಸಲಹೆ ನೀಡಿದ್ದರು. ಆ ಪ್ರಕಾರ ಅಂದು ನಮ್ಮ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿತು. ಸಾಮಾಜಿಕ ಚಿಂತನೆಯುಳ್ಳವರಾಗಿದ್ದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿಗೆ ಗೊ.ರು ಚನ್ನಬಸಪ್ಪ ಸೂಕ್ತ ಆಯ್ಕೆಯಾಗಿದ್ದು, ಅವರಿಂದ ಪ್ರಶಸ್ತಿಯ ತೂಕ ಇನ್ನೂ ಹೆಚ್ಚಾಗಿದೆ’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ ಶ್ರೇಷ್ಠ ಸಂದೇಶಗಳು ಹಾಗೂ ಸತ್ಕಾರ್ಯಗಳ ಮೂಲಕ ಅಜರಾಮರವಾಗಿದ್ದಾರೆ. ಗಂಧದ ಕೊರಡಿನಂತೆ, ದೀಪದ ಬೆಳಕಿನಂತೆ ಜನಕಲ್ಯಾಣಕ್ಕಾಗಿ ಶ್ರಮಿಸಿದ್ದ ಶ್ರೀಗಳು ಬಸವತತ್ವವನ್ನು ಜನರಿಗೆ ತಲುಪಿಸಲು ಅವಿರತ ಶ್ರಮ ವಹಿಸಿದರು’ ಎಂದು ತಿಳಿಸಿದರು.</p>.<p>‘ಪುಸ್ತಕ ಪ್ರಕಟಣೆ, ನಿರಂತರ ಶಿವಾನುಭವ ಕಾರ್ಯಕ್ರಮಗಳು, ಕಪ್ಪತ್ತಗುಡ್ಡ ರಕ್ಷಣೆ ಹೀಗೆ ಶ್ರೀಗಳ ಸಾಧನೆಯ ಮಜಲುಗಳು ಹಲವಾರು ಇದ್ದು, ಅವರ ಅಗಲಿಕೆ ನಂತರ ತೋಂಟದಾರ್ಯ ವಿದ್ಯಾಪೀಠದ ಕೆಲವು ನೌಕರರು ಹಾಗೂ ಪತ್ತಿನ ಸಂಘದ ಆದಾಯದಲ್ಲಿ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.</p>.<p>ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಪ್ಪತಗುಡ್ಡ ಹೋರಾಟವನ್ನು ಕೈಗೆತ್ತಿಕೊಳ್ಳದಿದ್ದರೆ ಇಂದು ಕಪ್ಪತ್ತಗುಡ್ಡ ಉಳಿಯುತ್ತಿರಲಿಲ್ಲ. ಶುದ್ಧ ಗಾಳಿ ನೀಡುವ ತಾಣ ಎಂಬ ಹಿರಿಮೆ ಪಡೆಯುತ್ತಿರಲಿಲ್ಲ. ಶಾಸಕನಾಗಿದ್ದಾಗ ಕೈಗೊಂಡ ಅನೇಕ ಕೆಲಸಗಳನ್ನು ವಿಶೇಷವಾಗಿ ಪರಿಸರಕ್ಕೆ ಸಂಬಂಧಪಟ್ಟ, ಕೆರೆ ತುಂಬಿಸುವ ಕಾರ್ಯಗಳನ್ನು ಶ್ರೀಗಳು ಶ್ಲಾಘಿಸುತ್ತಿದ್ದರು’ ಎಂದರು.</p>.<p>ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ಶ್ರೀಗಳು ನಾನು ಕಲಿತ ದಿಂಡೂರ ಶಾಲೆಗೆ ಆ ಕಾಲದಲ್ಲಿ ₹1 ಲಕ್ಷ ಖರ್ಚು ಮಾಡಿ ಶಾಲೆ ಅಭಿವೃದ್ಧಿಪಡಿಸಿದರು. ಅವರ ಡಂಬಳ ಶಾಲೆಯಲ್ಲಿ ನಾನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಾಗ ನಮ್ಮ ತಾಂಡಾದ ವಿದ್ಯಾರ್ಥಿಗಳಿಗೆ ಅಂತಃಕರಣದಿಂದ ತಾಯಿಯಂತೆ ಉಣಬಡಿಸುತ್ತಿದ್ದರು. ಅವರು ನಮ್ಮ ಜನಾಂಗದ ಬಗ್ಗೆ ಹೊಂದಿದ್ದ ಪ್ರೀತಿ ಸದಾ ಸ್ಮರಣೀಯ’ ಎಂದರು.</p>.<p>ಅತಿಥಿಗಳಾಗಿ ಪಾಲ್ಗೊಂಡಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಡಿ.ಕುಂಬಾರ ಮಾತನಾಡಿ, ‘ಲಿಂ. ಸಿದ್ಧಲಿಂಗ ಶ್ರೀಗಳು ನಾನು ಹುಟ್ಟಿದ ವಿಜಯಪುರ ಜಿಲ್ಲೆಯವರು ಎಂಬುದು ನನಗೆ ಅಭಿಮಾನ ಎನಿಸುತ್ತದೆ. ಗದಗ ಪೀಠಕ್ಕೆ ಅವರು ಪದಾರ್ಪಣೆ ಮಾಡುವಾಗ ನಾನು ಈ ಮಠದ ಶ್ರೀಮಂತಿಕೆಯನ್ನಲ್ಲ ಬದಲಿಗೆ ಭಕ್ತರ ಹೃದಯ ಶ್ರೀಮಂತಿಕೆ ನೋಡಿ ಈ ಮಠಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು. ಗೋಕಾಕ್ ವರದಿ ಜಾರಿಗಾಗಿ ನಡೆದ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಶ್ರೀಗಳು ನಾಡು-ನುಡಿಗಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ’ ಎಂದರು.</p>.<p>ಮುದೇನಗುಡಿ ಅಡವಿಸಿದ್ಧೇಶ್ವರಮಠದ ನಿರುಪಾಧೀಶ್ವರ ಸ್ವಾಮೀಜಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಳಂದದ ಕೋರಣೇಶ್ವರ ಸ್ವಾಮೀಜಿ, ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಅರಸಿಕೇರಿ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಶಾಸಕ ಜಿ.ಎಸ್.ಪಾಟೀಲ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಕೆ.ಎಚ್.ಬೇಲೂರ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ವೇದಿಕೆಯಲ್ಲಿದ್ದರು.</p>.<p>ತೋಂಟದ ಸಿದ್ಧಲಿಂಗ ಶ್ರೀಗಳ ಸಾವಿರಾರು ಭಕ್ತರು-ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<p>‘ವಿಶ್ವವಿದ್ಯಾಲಯಗಳ ಉಳಿವಿಗೆ ಧ್ವನಿ ಎತ್ತಿ’</p><p>‘ನಾಡಿನ ಸಾಹಿತಿಗಳು ಮಠಾಧೀಶರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪರ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಉಳಿವಿಗೆ ಧ್ವನಿ ಎತ್ತಬೇಕು. ನೀವು ಧ್ವನಿ ಎತ್ತಿದರೆ ಮಾತ್ರ ನಾವು ಆಡಳಿತಾತ್ಮಕ ರಾಜಕೀಯ ನಿರ್ಣಯ ಕೈಗೊಳ್ಳಲು ಸಾಧ್ಯ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಜಾನಪದ ವಿಶ್ವವಿದ್ಯಾಲಯ ಗೊರುಚ ಅವರ ಕನಸಿನ ಕೂಸು. ಆದರೆ ಅದು ಆರ್ಥಿಕವಾಗಿ ಇನ್ನೂ ಸದೃಢವಾಗಿಲ್ಲ. ಅದು ಗೊರುಚ ಅವರ ಮಾನಸಿಕ ಶಕ್ತಿಯಂತೆ ಇನ್ನಷ್ಟು ದೃಢವಾಗಿ ಬೆಳೆಯಬೇಕಿದೆ ಎಂದು ಹೇಳಿದರು. ‘ತನ್ನದೇ ಪರಂಪರೆ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಸದ್ಯದ ಸ್ಥಿತಿ ಕೂಡ ಉತ್ತಮವಾಗಿಲ್ಲ. ಈ ವಿಶ್ವವಿದ್ಯಾಲಯದ ವಾರ್ಷಿಕ ಬಜೆಟ್ ₹82 ಕೋಟಿ. ಆದರೆ ಅಲ್ಲಿಂದ ನಿವೃತ್ತರಾದ ನೌಕರರಿಗೆ ಪಿಂಚಣಿ ಕೊಡಲು ₹120 ಕೋಟಿ ಬೇಕಿದೆ. ಹೀಗಾಗಿ ಈ ವಿಶ್ವವಿದ್ಯಾಲಯದ ಗ್ರಾಫ್ ಇಳಿಮುಖವಾಗುತ್ತಿದೆ’ ಎಂದು ಬೇಸರಿಸಿದರು. ‘ವಿಶ್ವವಿದ್ಯಾಲಯಗಳ ಉಳಿವಿಗಾಗಿ ಜನರು ಧ್ವನಿ ಎತ್ತಬೇಕು. ಸಮಾಜ ಮೌನವಾದರೆ ಶೈಕ್ಷಣಿಕ ಸಂಸ್ಥೆಗಳು ಅವನತಿಯ ಹಾದಿ ಹಿಡಿಯುತ್ತವೆ. ಈ ನಿಟ್ಟಿನಲ್ಲಿ ಗೊರುಚ ಅವರಂತಹ ತಜ್ಞರು ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.</p>.<p>‘ಹಲವು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ</p><p> ‘ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಕುರಿತಾಗಿ ಸದನದಲ್ಲಿ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ ಯಾವ ಸರ್ಕಾರಗಳೂ ಈ ಬಗ್ಗೆ ಕ್ರಮವಹಿಸಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು. ‘ಈ ವಿಷಯವಾಗಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಪ್ರಸ್ತುತ ಸಿಎಂ ಆಗಿರುವ ಸಿದ್ದರಾಮಯ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗದಿದ್ದರೆ ಹೋಗಲಿ ಅಲ್ಲಿನ ನೌಕರರು ಹಾಗೂ ನಿವೃತ್ತದಾರರಿಗೆ ಪಿಂಚಣಿ ಕೊಡುವಷ್ಟಾದರೂ ಹಣ ಬಿಡುಗಡೆ ಮಾಡಬೇಕು. ವ್ಯಕ್ತಿ ಸಮಾಜ ದೇಶ ನಿರ್ಮಾಣ ಹಾಗೂ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವವಿದ್ಯಾಲಯಗಳ ಉಳಿವಿಗೆ ಸರ್ಕಾರಗಳು ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>