<p><strong>ಮುಂಡರಗಿ:</strong> 'ನಾವೆಲ್ಲ ನಿತ್ಯ ಹಲವು ಒತ್ತಡಗಳಲ್ಲಿ ಬದುಕುತ್ತಿದ್ದು, ಬದುಕಿನ ಜಂಜಾಟಗಳಲ್ಲಿ ಭಗವಂತನನ್ನು ಮರೆಯುತ್ತಿದ್ದೇವೆ. ಹೀಗಾಗಿ ಜಗತ್ತಿನೆಲ್ಲಡೆ ಅಶಾಂತಿ ಮೂಡುವಂತಾಗಿದೆ' ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮೀಜಿ ತಿಳಿಸಿದರು.</p><p>ಹಜರತ್ ಮಹಮ್ಮದ್ ಪೈಗಂಬರ್ ಅವರ ಜಯಂತಿಯ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.</p><p>ಜಾತಿಗಳ ಮಧ್ಯದಲಿ ನಾವು ಸೃಷ್ಟಿಸಿಕೊಂಡಿರುವ ಗೊಡೆಗಳು ನಮ್ಮನ್ನು ಬೇರ್ಪಡಿಸುತ್ತಲಿವೆ. ಆದ್ದರಿಂದ ನಾವೆಲ್ಲ ಜಾತಿ ಗೋಡೆಗಳನ್ನು ಕಿತ್ತೊಗೆದು ಎಲ್ಲರು ಸಹೋದರರಂತೆ ಸೌಹಾರ್ದದಿಂದ ಬದುಕಬೇಕು ಎಂದು ಸಲಹೆ ನೀಡಿದರು.</p><p>ಹಜರತ್ ಸೈಯದ್ ಷಾ ಮುಸ್ತಾಪಾ ಖಾದ್ರಿ ಮಾತನಾಡಿ, ಇಸ್ಲಾಂ ಧರ್ಮಕ್ಕೆ ತುಂಬಾ ಪ್ರಾಚೀನ ಇತಿಹಾಸವಿದ್ದು, ಅದು ಎಲ್ಲರನ್ನು ಸರಿದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತದೆ. ಸದ್ಗುಣಗಳುಳ್ಳವನೇ ಪರಮಾತ್ಮ ಎನ್ನುವುದನ್ನು ಇಸ್ಲಾಂ ಬೋಧಿಸುತ್ತದೆ ಎಂದು ತಿಳಿಸಿದರು.</p><p>ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.</p><p>ಎಚ್.ಎಂ.ತಳಗಡೆ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.</p><p>ಮುಖಂಡರಾದ ನಬಿಸಾಬ್ ಕೆಲೂರ, ಕೆ.ವಿ.ಹಂಚಿನಾಳ, ಡಿ.ಡಿ.ಮೋರನಾಳ, ಎಸ್.ಡಿ.ಮಕಾಂದಾರ, ಡಿ.ಎಂ.ಕಾತರಕಿ, ಶಿವಪ್ಪ ಚಿಕ್ಕಣ್ಣವರ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಮೈಲಾರೆಪ್ಪ ಕಲಕೇರಿ, ನಾಗರಾಜ ಕೊರ್ಲಹಳ್ಳಿ, ಡಿ.ಜಿ.ಪೂಜಾರ, ನಿಂಗಪ್ಪ ಹಾಲಿನವರ, ಎಚ್.ಡಿ.ಪೂಜಾರ, ಬೂದಪ್ಪ ಸಂಶಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ:</strong> 'ನಾವೆಲ್ಲ ನಿತ್ಯ ಹಲವು ಒತ್ತಡಗಳಲ್ಲಿ ಬದುಕುತ್ತಿದ್ದು, ಬದುಕಿನ ಜಂಜಾಟಗಳಲ್ಲಿ ಭಗವಂತನನ್ನು ಮರೆಯುತ್ತಿದ್ದೇವೆ. ಹೀಗಾಗಿ ಜಗತ್ತಿನೆಲ್ಲಡೆ ಅಶಾಂತಿ ಮೂಡುವಂತಾಗಿದೆ' ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮೀಜಿ ತಿಳಿಸಿದರು.</p><p>ಹಜರತ್ ಮಹಮ್ಮದ್ ಪೈಗಂಬರ್ ಅವರ ಜಯಂತಿಯ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.</p><p>ಜಾತಿಗಳ ಮಧ್ಯದಲಿ ನಾವು ಸೃಷ್ಟಿಸಿಕೊಂಡಿರುವ ಗೊಡೆಗಳು ನಮ್ಮನ್ನು ಬೇರ್ಪಡಿಸುತ್ತಲಿವೆ. ಆದ್ದರಿಂದ ನಾವೆಲ್ಲ ಜಾತಿ ಗೋಡೆಗಳನ್ನು ಕಿತ್ತೊಗೆದು ಎಲ್ಲರು ಸಹೋದರರಂತೆ ಸೌಹಾರ್ದದಿಂದ ಬದುಕಬೇಕು ಎಂದು ಸಲಹೆ ನೀಡಿದರು.</p><p>ಹಜರತ್ ಸೈಯದ್ ಷಾ ಮುಸ್ತಾಪಾ ಖಾದ್ರಿ ಮಾತನಾಡಿ, ಇಸ್ಲಾಂ ಧರ್ಮಕ್ಕೆ ತುಂಬಾ ಪ್ರಾಚೀನ ಇತಿಹಾಸವಿದ್ದು, ಅದು ಎಲ್ಲರನ್ನು ಸರಿದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತದೆ. ಸದ್ಗುಣಗಳುಳ್ಳವನೇ ಪರಮಾತ್ಮ ಎನ್ನುವುದನ್ನು ಇಸ್ಲಾಂ ಬೋಧಿಸುತ್ತದೆ ಎಂದು ತಿಳಿಸಿದರು.</p><p>ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.</p><p>ಎಚ್.ಎಂ.ತಳಗಡೆ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.</p><p>ಮುಖಂಡರಾದ ನಬಿಸಾಬ್ ಕೆಲೂರ, ಕೆ.ವಿ.ಹಂಚಿನಾಳ, ಡಿ.ಡಿ.ಮೋರನಾಳ, ಎಸ್.ಡಿ.ಮಕಾಂದಾರ, ಡಿ.ಎಂ.ಕಾತರಕಿ, ಶಿವಪ್ಪ ಚಿಕ್ಕಣ್ಣವರ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಮೈಲಾರೆಪ್ಪ ಕಲಕೇರಿ, ನಾಗರಾಜ ಕೊರ್ಲಹಳ್ಳಿ, ಡಿ.ಜಿ.ಪೂಜಾರ, ನಿಂಗಪ್ಪ ಹಾಲಿನವರ, ಎಚ್.ಡಿ.ಪೂಜಾರ, ಬೂದಪ್ಪ ಸಂಶಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>