ನರೇಗಲ್ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ(ಜಾಡರ) ಸೀತಾಫಲ ಹಣ್ಣಿನ ಗಿಡಗಳ ಮುಂದೆ ನಿಂತಿರುವುದು
ಹವಾಮಾನಕ್ಕೆ ತಕ್ಕಂತೆ ಭೂಮಿ ಹದಗೊಳಿಸಿ ಕೃಷಿ ಮಾಡಿದರೆ ಉತ್ತ ಸಾಧನೆ ಮಾಡಬಹುದು
ವೀರಣ್ಣ ಲಕ್ಕುಂಡಿ(ಜಾಡರ) ರೈತ
ಕೃಷಿ ಕಾಯಕಕ್ಕೆ ಆಳು ಸಿಗುತ್ತಿಲ್ಲ
ಕೈತುಂಬಾ ಸಂಬಳ ಕೊಟ್ಟರು ಹೊಲದ ಕೆಲಸ ಮಾಡಲು ಆಳು ಸಿಗುತ್ತಿಲ್ಲ. ಇದರಿಂದ ಕೆಲವೊಮ್ಮೆ ಕೃಷಿ ಕಾಯಕ ತುಂಬಾ ಬೇಜಾರು ಅನಿಸುತ್ತದೆ. ಊರಲ್ಲಿ ಖಾಲಿ ಅಲೆಯುವ ಯುವಕ ಯುವತಿಯರು ಹೊಲದ ಕೆಲಸವೆಂದರೆ ಅಸಡ್ಡೆ ಭಾವನೆ ತೋರುತ್ತಾರೆ. ಈಗಿನವರು ಕೇವಲ ಮಾತಲ್ಲಿ ರೈತರಾಗಿದ್ದಾರೆ ಹೊರತು ಹೊಲದಲ್ಲಿ ಬೆವರು ಸುರಿಸಿ ರೈತರಾಗುತ್ತಿಲ್ಲ. ಹೀಗಾಗಿ ದುಡಿಯುವವರೇ ಇಲ್ಲವಾದರೆ ಕೃಷಿ ಮಾಲೀಕರಿಗೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ವೀರಣ್ಣ.