ಗದಗ:ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ11264 ಕ್ಯೂಸೆಕ್ಗೆ ಏರಿಕೆಯಾಗಿದೆ.
ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿದು, ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಗದಗ ಜಿಲ್ಲೆಯ ಲಖಮಾಪುರ, ಕೊಣ್ಣೂರ, ಬೂದಿಹಾಳ, ಹೊಳೆಮಣ್ಣೂರ ಗ್ರಾಮಗಳಲ್ಲಿ ಪ್ರವಾಹ ಭೀತಿ ಕಂಡುಬಂದಿದೆ.
ನದಿಯಲ್ಲಿ ನೀರು ಇಳಿದಿದ್ದ ಎರಡೇ ದಿನಗಳಲ್ಲಿ ಮತ್ತು ನೀರಿನ ಮಟ್ಟ ಏರಿಕೆಯಾಗಿರುವುದರಿಂದನದಿ ತೀರದ ಕುಟುಂಬಗಳು ಮತ್ತೆ ಕಂಗಾಲಾಗಿವೆ.