<p><strong>ಗದಗ:</strong> ಅವಳಿ ನಗರದ ಜನರು ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸಲು ಮಂಗಳವಾರ ಭರದ ಸಿದ್ಧತೆ ನಡೆಸಿದ್ದು ಕಂಡು ಬಂತು. ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿತ್ತು.</p>.<p>ನಗರದ ನಾಮಜೋಶಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗಿತು. ಹಬ್ಬ ಆಚರಣೆಗೆ ಬೇಕಿರುವ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿರು.</p>.<p>ಆಯುಧಪೂಜೆ ವೇಳೆ ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಅಲಂಕರಿಸಿ ಪೂಜಿಸಲು ಜನರು ಹೂವು ಖರೀದಿಗೆ ಮುಗಿಬಿದ್ದಿದ್ದರು. ಹಬ್ಬದ ಅಂಗವಾಗಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಚೆಂಡು ಹೂವು ಒಂದು ಮಾರು ₹60, ಸೇವಂತಿಗೆ ₹50ಕ್ಕೆ ಮಾರಾಟವಾಯಿತು. ಕನಕಾಂಬರ, ಮಲ್ಲಿಗೆ ಬೆಲೆ ₹100 ಇತ್ತು.</p>.<p>ಪೂಜೆಗೆ ಬೇಕಿರುವ ಹಣ್ಣುಗಳ ಬೆಲೆ ತುಸು ದುಬಾರಿಯಾಗಿತ್ತು. ಸೇಬು ಕೆ.ಜಿ. ₹200, ಮೂಸಂಬಿ ₹60, ಕಿತ್ತಳೆ ₹90, ಸಪೋಟಾ ₹60, ಪೈನಾಪಲ್ ₹50ಕ್ಕೆ ಮಾರಾಟವಾದವು. ಏಲಕ್ಕಿ ಬಾಳೆ ₹100, ಪಚ್ಚಬಾಳೆ ಡಜನ್ಗೆ ₹50, ಬಾಳೆಕಂದು, ಮಾವಿನ ಸೊಪ್ಪು ಜೋಡಿಗೆ ₹40ಕ್ಕೆ ಮಾರಾಟವಾದವು.</p>.<p>‘ಹಬ್ಬದ ಖರೀದಿ ಭರಾಟೆ ಈ ಬಾರಿ ಹೆಚ್ಚೇನೂ ಇಲ್ಲ ಅನಿಸಿದೆ. ಜನದಟ್ಟಣೆ ಜಾಸ್ತಿ ಇದ್ದರೂ ಹೂವಿನ ಮಾರಾಟ ಕುಸಿದಿದೆ. ಬುಧವಾರ, ಗುರುವಾರ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಹೂವು ಮಾರುವ ಮಹಿಳೆಯೊಬ್ಬರು ತಿಳಿಸಿದರು.</p>.<p>ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಹೆಣಗಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಅವಳಿ ನಗರದ ಜನರು ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸಲು ಮಂಗಳವಾರ ಭರದ ಸಿದ್ಧತೆ ನಡೆಸಿದ್ದು ಕಂಡು ಬಂತು. ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿತ್ತು.</p>.<p>ನಗರದ ನಾಮಜೋಶಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗಿತು. ಹಬ್ಬ ಆಚರಣೆಗೆ ಬೇಕಿರುವ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿರು.</p>.<p>ಆಯುಧಪೂಜೆ ವೇಳೆ ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಅಲಂಕರಿಸಿ ಪೂಜಿಸಲು ಜನರು ಹೂವು ಖರೀದಿಗೆ ಮುಗಿಬಿದ್ದಿದ್ದರು. ಹಬ್ಬದ ಅಂಗವಾಗಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಚೆಂಡು ಹೂವು ಒಂದು ಮಾರು ₹60, ಸೇವಂತಿಗೆ ₹50ಕ್ಕೆ ಮಾರಾಟವಾಯಿತು. ಕನಕಾಂಬರ, ಮಲ್ಲಿಗೆ ಬೆಲೆ ₹100 ಇತ್ತು.</p>.<p>ಪೂಜೆಗೆ ಬೇಕಿರುವ ಹಣ್ಣುಗಳ ಬೆಲೆ ತುಸು ದುಬಾರಿಯಾಗಿತ್ತು. ಸೇಬು ಕೆ.ಜಿ. ₹200, ಮೂಸಂಬಿ ₹60, ಕಿತ್ತಳೆ ₹90, ಸಪೋಟಾ ₹60, ಪೈನಾಪಲ್ ₹50ಕ್ಕೆ ಮಾರಾಟವಾದವು. ಏಲಕ್ಕಿ ಬಾಳೆ ₹100, ಪಚ್ಚಬಾಳೆ ಡಜನ್ಗೆ ₹50, ಬಾಳೆಕಂದು, ಮಾವಿನ ಸೊಪ್ಪು ಜೋಡಿಗೆ ₹40ಕ್ಕೆ ಮಾರಾಟವಾದವು.</p>.<p>‘ಹಬ್ಬದ ಖರೀದಿ ಭರಾಟೆ ಈ ಬಾರಿ ಹೆಚ್ಚೇನೂ ಇಲ್ಲ ಅನಿಸಿದೆ. ಜನದಟ್ಟಣೆ ಜಾಸ್ತಿ ಇದ್ದರೂ ಹೂವಿನ ಮಾರಾಟ ಕುಸಿದಿದೆ. ಬುಧವಾರ, ಗುರುವಾರ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಹೂವು ಮಾರುವ ಮಹಿಳೆಯೊಬ್ಬರು ತಿಳಿಸಿದರು.</p>.<p>ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಹೆಣಗಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>