<p><strong>ಗದಗ:</strong> ವ್ಯಾಪಾರ ವಹಿವಾಟಿನ ಲೆಕ್ಕಪತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಯಶಸ್ವಿ ವ್ಯಾಪಾರಸ್ಥನಾಗಲು ಸಾಧ್ಯ ಎಂದು ಲೆಕ್ಕಪರಿಶೋಧಕ ನರೇಶ್ ಶಹಾ ಹೇಳಿದರು.</p>.<p>ನಗರದ ಕ್ಲಾಥ್ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆದ ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್ ಅಸೋಸಿಯೇಷನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.</p>.<p>‘ನಿತ್ಯದ ವ್ಯವಹಾರದ ಜಮಾ ಖರ್ಚು ಸರಿಯಾಗಿದ್ದರೆ ವ್ಯವಹಾರದಲ್ಲಿ ಸ್ಪಷ್ಠತೆ ಬರುವುದು. ಈ ವಿಷಯವಾಗಿ ಕಾಳಜಿ ಅವಶ್ಯಕ. ತೆರಿಗೆ ವಿಷಯಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ಇರಬೇಕು. ಲೆಕ್ಕಪರಿಶೋಧಕರ ಮಾರ್ಗದರ್ಶನ ಪಡೆದು ಅವರ ಸಲಹೆ ಅನುಸರಿಸಬೇಕು’ ಎಂದು ಹೇಳಿದರು. </p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಬನ್ಸಾಲಿ ಮಾತನಾಡಿ, ‘ಸಂಘಟನೆಯ ಏಕತೆ, ವ್ಯಾಪಾರಿಗಳ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.</p>.<p>ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಸೋಹನ್ರಾಜ್ ಶಹಾ ಹಾಗೂ ಹರೀಶ್ ಜಮತಾನಿ ಅವರನ್ನು ಗೌರವಿಸಲಾಯಿತು.</p>.<p>ಸಂಘದ ಕಾರ್ಯದರ್ಶಿ ಹೀರಾಚಂದ್ ಸೇಮಲಾನಿ, ಖಜಾಂಚಿ ಮಹಾವೀರ ಸೊಲಂಕಿ, ಸಲಹೆಗಾರ ಹರೀಶ್ ಶಹಾ ಹಾಗೂ ಸದಸ್ಯರಾದ ಪೃಥ್ವಿರಾಜ್ ಬನ್ಸಾಲಿ, ಪ್ರವೀಣ ಸಂಕಲೇಚಾ, ಸ್ವರೂಪ್, ರಾಜೇಂದ್ರ ಸಿಂಘ್ವಿ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾರ್ಲೇಚಾ ಇದ್ದರು. ಕಿಶನ್ ಬಾಗಮಾರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ವ್ಯಾಪಾರ ವಹಿವಾಟಿನ ಲೆಕ್ಕಪತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಯಶಸ್ವಿ ವ್ಯಾಪಾರಸ್ಥನಾಗಲು ಸಾಧ್ಯ ಎಂದು ಲೆಕ್ಕಪರಿಶೋಧಕ ನರೇಶ್ ಶಹಾ ಹೇಳಿದರು.</p>.<p>ನಗರದ ಕ್ಲಾಥ್ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆದ ಗದಗ ಜಿಲ್ಲಾ ಕ್ಲಾಥ್ ಮರ್ಚೆಂಟ್ಸ್ ಅಸೋಸಿಯೇಷನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.</p>.<p>‘ನಿತ್ಯದ ವ್ಯವಹಾರದ ಜಮಾ ಖರ್ಚು ಸರಿಯಾಗಿದ್ದರೆ ವ್ಯವಹಾರದಲ್ಲಿ ಸ್ಪಷ್ಠತೆ ಬರುವುದು. ಈ ವಿಷಯವಾಗಿ ಕಾಳಜಿ ಅವಶ್ಯಕ. ತೆರಿಗೆ ವಿಷಯಗಳ ಬಗ್ಗೆ ವ್ಯಾಪಾರಸ್ಥರಿಗೆ ಮಾಹಿತಿ ಇರಬೇಕು. ಲೆಕ್ಕಪರಿಶೋಧಕರ ಮಾರ್ಗದರ್ಶನ ಪಡೆದು ಅವರ ಸಲಹೆ ಅನುಸರಿಸಬೇಕು’ ಎಂದು ಹೇಳಿದರು. </p>.<p>ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಬನ್ಸಾಲಿ ಮಾತನಾಡಿ, ‘ಸಂಘಟನೆಯ ಏಕತೆ, ವ್ಯಾಪಾರಿಗಳ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.</p>.<p>ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಸೋಹನ್ರಾಜ್ ಶಹಾ ಹಾಗೂ ಹರೀಶ್ ಜಮತಾನಿ ಅವರನ್ನು ಗೌರವಿಸಲಾಯಿತು.</p>.<p>ಸಂಘದ ಕಾರ್ಯದರ್ಶಿ ಹೀರಾಚಂದ್ ಸೇಮಲಾನಿ, ಖಜಾಂಚಿ ಮಹಾವೀರ ಸೊಲಂಕಿ, ಸಲಹೆಗಾರ ಹರೀಶ್ ಶಹಾ ಹಾಗೂ ಸದಸ್ಯರಾದ ಪೃಥ್ವಿರಾಜ್ ಬನ್ಸಾಲಿ, ಪ್ರವೀಣ ಸಂಕಲೇಚಾ, ಸ್ವರೂಪ್, ರಾಜೇಂದ್ರ ಸಿಂಘ್ವಿ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾರ್ಲೇಚಾ ಇದ್ದರು. ಕಿಶನ್ ಬಾಗಮಾರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>