ಗಾಂಧಿ ಗುಡಿ ಕಾಮಗಾರಿ ಅರ್ಧಕ್ಕೆ ನಿಂತು ದಶಕಗಳು ವರ್ಷಗಳಾಗಿವೆ. ಬೆಟಗೇರಿ ಜನರು, ಶಾಲಾ ಮಕ್ಕಳು ಮಾತ್ರ ಗಾಂಧಿ ಚಿತಾ ಭಸ್ಮಕ್ಕೆ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಅಲ್ಲಿರುವ ಕಲ್ಲಿಗೆ ನಮಸ್ಕರಿಸಿ ಮುಂದಕ್ಕೆ ಹೋಗುತ್ತಾರೆ. ಗಾಂಧಿಜಿ ತತ್ವ ಸಿದ್ಧಾಂತಗಳು ಉಳಿಯಬೇಕು, ಮುಂದಿನ ಪಿಳಿಗೆಗೆ ತಿಳಿಯಬೇಕು ಅಂದರೆ ಶೀಘ್ರವಾಗಿ ಈ ಗುಡಿಯ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.