‘ಅಂದು ಶ್ರೀಗಳ ಹೇಳಿಕೆಯನ್ನು ಕೆಲವರು ವಿರೋಧಿಸಿದ್ದರು. ಆದರೆ, ಅವರ ಹೇಳಿಕೆಯಲ್ಲಿ ಸತ್ಯವಿದೆ ಎಂದು ಈಗ ಸಾಬೀತಾಗಿದೆ. ಜ.3ರಂದು ಶಾಲಾ, ಕಾಲೇಜುಗಳಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ’ ಎಂದು ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ, ಜಿಲ್ಲೆಯ ದಲಿತಪರ ಸಂರ್ಘಟನೆಗಳು ಹೇಳಿವೆ.