ಶನಿವಾರ ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಡ್ರಗ್ಸ್ ಜಾಲ ಈ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಮುಖ್ಯ ಕಾರಣ ಸರ್ಕಾರಿ ವ್ಯವಸ್ಥೆ. ಹಾಗಾಗಿ, ಈ ಕೊಂಡಿಯನ್ನು ತುಂಡರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಟ್ಟಿಯಾದ ಕ್ರಮ ಕೈಗೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯದೇ ಧೈರ್ಯದಿಂದ ಮುನ್ನಡೆಯಬೇಕು. ನಾವೆಲ್ಲರೂ ಅದಕ್ಕೆ ಕೈ ಜೋಡಿಸುತ್ತೇವೆ’ ಎಂದು ಹೇಳಿದರು.