ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಗದಗ | ಅಸ್ಮಿತೆ, ಸಂಸ್ಕೃತಿಯ ಪ್ರತೀಕ ಭಾಷೆ: ಹಲಗತ್ತಿ

Published : 28 ನವೆಂಬರ್ 2025, 5:00 IST
Last Updated : 28 ನವೆಂಬರ್ 2025, 5:00 IST
ಫಾಲೋ ಮಾಡಿ
Comments
ಶೇ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸದಿದ್ದರೆ ದೇಶದ ಬೆಳವಣಿಗೆ ಅಸಾಧ್ಯ
ಪ್ರೊ. ಚಂದ್ರಶೇಖರ ವಸ್ತ್ರದ ಸಾಹಿತಿ
ಕನ್ನಡ ನಮ್ಮೆಲ್ಲರ ಜೀವಾಳ. ಮಾತೃಭಾಷೆ ಜತೆಗೆ ಇಂಗ್ಲಿಷ್‌ ಕಲಿಯಲು ಯಾವುದೇ ಅಭ್ಯಂತರವಿಲ್ಲ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು
ಎಸ್.ಪಿ.ಸಂಶಿಮಠ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ
ಕನ್ನಡ ಉಸಿರಾಗಲಿ: ಪ್ರೊ. ಸುಧಾ
‘ಕನ್ನಡ ನಾಡು ಕನ್ನಡ ಭಾಷೆಗೆ ತನ್ನದೇ ಆದ ಘನತೆ ಇದೆ. ಜತೆಗೆ 2000 ವರ್ಷಗಳ ಇತಿಹಾಸ ಹೊಂದಿದೆ’ ಎಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.  ‘ಕನ್ನಡ ಕನ್ನಡಿಗ ಕರ್ನಾಟಕತ್ವ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ‘ಕನ್ನಡ ನಾಡಿಗೆ ಬಂದ ಕರ್ನಾಟಕ ಎಂಬ ಹೆಸರು ಇಂದು ಉಸಿರಾಗಬೇಕಿದೆ. ಕನ್ನಡದ ಜ್ಞಾನ ಸಂಪತ್ತು ಶಬ್ದ ಸಂಪತ್ತು ಬೆಳೆಯಬೇಕು. ಇದು ಸಾಧ್ಯವಾಗಬೇಕಾದರೆ ಕೇವಲ ಶಿಕ್ಷಕರು ಸಾಹಿತಿಗಳಷ್ಟೇ ಕನ್ನಡದಲ್ಲಿ ಬರೆದರೆ ಸಾಲದು. ವೈದ್ಯರು ವಕೀಲರು ವಿಜ್ಞಾನಿಗಳು ಹೀಗೆ ಸಮಾಜದ ವಿವಿಧ ವರ್ಗಗಳು ಕನ್ನಡವನ್ನು ಬಳಸಬೇಕು ಕನ್ನಡದಲ್ಲಿಯೇ ಬರೆಯಬೇಕು ಮತ್ತು ವ್ಯವಹರಿಸಬೇಕು’ ಎಂದು ಹೇಳಿದರು. ‘ಕನ್ನಡ ಚೈತನ್ಯವುಳ್ಳ ಭಾಷೆ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಹೊರಬರಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT