<p><strong>ಲಕ್ಷ್ಮೇಶ್ವರ</strong>: ಪಟ್ಟಣದ ಎಪಿಎಂಸಿ ಆವರಣದಲ್ಲಿನ ಗೋಡೌನ್ಗಳ ಎದುರು ಮೆಕ್ಕೆಜೋಳ ಮಾರಾಟಕ್ಕೆ ರೈತರು ಭಾನುವಾರ ಮಧ್ಯರಾತ್ರಿಯಿಂದ ಚಳಿಯಲ್ಲೇ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದರು.</p>.<p>ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಈಗಾಗಲೇ ಆರಂಭವಾಗಿದೆ. ಮೊದಲು ನೋಂದಣಿ ಮಾಡಿಸಿರುವ ರೈತರು ಸೋಮವಾರ ಮೆಕ್ಕೆಜೋಳ ತರಲು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ರೈತರು ಭಾನುವಾರ ಮಧ್ಯ ರಾತ್ರಿಯೇ ಬಂದು ಕಾಯುತ್ತಿದ್ದರು.</p>.<p>ಆದರೆ ಸೋಮವಾರ ಮಧ್ಯಾಹ್ನ 12 ಗಂಟೆ ಆದರೂ ಅಧಿಕಾರಿಗಳು ಮೆಕ್ಕೆಜೋಳ ತೆಗೆದುಕೊಳ್ಳಲು ಮುಂದಾಗಲಿಲ್ಲ. ಇದರಿಂದಾಗಿ ಕೆಲ ರೈತರು ಆಕ್ರೋಶಗೊಂಡಿದ್ದರು. ನಂತರ ಅಧಿಕಾರಿಗಳು ಎರಡ್ಮೂರು ದಿನಗಳಿಂದ ಖರೀದಿಸಿದ ಮೆಕ್ಕೆಜೋಳವನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಿದ ನಂತರ ಖರೀದಿಗೆ ಮುಂದಾದರು.</p>.<p>‘ನಾವು ಭಾನುವಾರ ರಾತ್ರಿಯೇ ಬಂದೇವಿ. ಆದರ ಸೋಮವಾರ ಮಧ್ಯಾಹ್ನ ಆದರೂ ಇನ್ನೂ ಗ್ವಾನಜ್ವಾಳ ತಗೊಂಡಿಲ್ರೀ’ ಎಂದು ಗೊಜನೂರು ಗ್ರಾಮದ ರೈತರು ಅಳಲು ತೋಡಿಕೊಂಡರು.</p>.<p>‘ರೈತರಿಗೆ ತೊಂದರೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಗೋವಿನಜೋಳ ಖರೀದಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಒತ್ತಾಯಿಸಿದರು.<br /><br /></p>
<p><strong>ಲಕ್ಷ್ಮೇಶ್ವರ</strong>: ಪಟ್ಟಣದ ಎಪಿಎಂಸಿ ಆವರಣದಲ್ಲಿನ ಗೋಡೌನ್ಗಳ ಎದುರು ಮೆಕ್ಕೆಜೋಳ ಮಾರಾಟಕ್ಕೆ ರೈತರು ಭಾನುವಾರ ಮಧ್ಯರಾತ್ರಿಯಿಂದ ಚಳಿಯಲ್ಲೇ ಸರದಿ ಸಾಲಿನಲ್ಲಿ ಕಾದು ಕುಳಿತಿದ್ದರು.</p>.<p>ಲಕ್ಷ್ಮೇಶ್ವರದಲ್ಲಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಈಗಾಗಲೇ ಆರಂಭವಾಗಿದೆ. ಮೊದಲು ನೋಂದಣಿ ಮಾಡಿಸಿರುವ ರೈತರು ಸೋಮವಾರ ಮೆಕ್ಕೆಜೋಳ ತರಲು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ರೈತರು ಭಾನುವಾರ ಮಧ್ಯ ರಾತ್ರಿಯೇ ಬಂದು ಕಾಯುತ್ತಿದ್ದರು.</p>.<p>ಆದರೆ ಸೋಮವಾರ ಮಧ್ಯಾಹ್ನ 12 ಗಂಟೆ ಆದರೂ ಅಧಿಕಾರಿಗಳು ಮೆಕ್ಕೆಜೋಳ ತೆಗೆದುಕೊಳ್ಳಲು ಮುಂದಾಗಲಿಲ್ಲ. ಇದರಿಂದಾಗಿ ಕೆಲ ರೈತರು ಆಕ್ರೋಶಗೊಂಡಿದ್ದರು. ನಂತರ ಅಧಿಕಾರಿಗಳು ಎರಡ್ಮೂರು ದಿನಗಳಿಂದ ಖರೀದಿಸಿದ ಮೆಕ್ಕೆಜೋಳವನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಿದ ನಂತರ ಖರೀದಿಗೆ ಮುಂದಾದರು.</p>.<p>‘ನಾವು ಭಾನುವಾರ ರಾತ್ರಿಯೇ ಬಂದೇವಿ. ಆದರ ಸೋಮವಾರ ಮಧ್ಯಾಹ್ನ ಆದರೂ ಇನ್ನೂ ಗ್ವಾನಜ್ವಾಳ ತಗೊಂಡಿಲ್ರೀ’ ಎಂದು ಗೊಜನೂರು ಗ್ರಾಮದ ರೈತರು ಅಳಲು ತೋಡಿಕೊಂಡರು.</p>.<p>‘ರೈತರಿಗೆ ತೊಂದರೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಗೋವಿನಜೋಳ ಖರೀದಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಒತ್ತಾಯಿಸಿದರು.<br /><br /></p>