ಮೊಹರಂ ಹಬ್ಬಕ್ಕೋಸ್ಕರ ತಮ್ಮ ಬೇಡಿಕೆಗಳು ಈಡೇರಲಿ ಎಂದು ಬಹುರೂಪಿಗಳು ಹಾಗೂ ಹರಕೆ ಬೇಡಿಕೊಂಡವರು ಅಳ್ಳೊಳ್ಳಿ ಬವ್ವ ವೇಷಧಾರಿಗಳು, ಹುಲಿ ವೇಷಧಾರಿಗಳು ಮೌನವ್ರತದೊಂದಿಗೆ ಊರೂರು ಅಲೆದಾಡಿ ಭಿಕ್ಷೆ ಬೇಡಿ ಆ ಕಾಣಿಕೆಯನ್ನು ದೇವರಿಗೆ ಸಲ್ಲಿಸುತ್ತಾರೆ. ಹೀಗೆ ಮಾಡುವುದರಿಂದ ವೇಷಧಾರಿಗಳ ಕುಟುಂಬದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಈಗಲೂ ಇದೆ. ಪಟ್ಟಣದಲ್ಲಿ ಸವದತ್ತಿ, ಬಾಗಲಕೋಟೆ, ಮಮಟಗೇರಿ ಸೇರಿದಂತೆ ಮೊದಲಾದ ಸ್ಥಳಗಳಿಂದ ಬಂದ ವೇಷಧಾರಿಗಳು ಸಂಚರಿಸಿದ್ದು ಕಂಡು ಬಂತು.