<p><strong>ಲಕ್ಷ್ಮೇಶ್ವರ</strong>: ತಾಲ್ಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ನಡುವಿರುವ ಮಾಲ್ಕಿ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೇ ಗುತ್ತಿಗೆದಾರರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು ಅಧಿಕ ಭಾರಕ್ಕೆ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಬುಧವಾರ ಅಕ್ಕಿಗುಂದ ಗ್ರಾಮಸ್ಥರು ಟಿಪ್ಪರ್ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ಶೆಟ್ಟಿಕೇರಿ-ಅಕ್ಕಿಗುಂದ ಮಧ್ಯ ಅಕ್ಕಿಗುಂದ ಗುಡ್ಡದ ಹತ್ತಿರ ಮಾಲ್ಕಿ ಜಮೀನಿನಲ್ಲಿ ಯಾವುದೇ ಭಯ ಇಲ್ಲದೆ ಮಣ್ಣುಗಳ್ಳರು ಹಿಟಾಚಿಗಳ ಮೂಲಕ ನಿರಂತರವಾಗಿ ಮಣ್ಣನ್ನು ಲೂಟಿ ಮಾಡಲಾಗುತ್ತಿದ್ದಾರೆ. ಪ್ರತಿದಿನ ನೂರಾರು ಲೋಡ್ ಮಣ್ಣು ಇಲ್ಲಿಂದ ಸಾಗಾಟ ನಡೆಯುತ್ತಿದ್ದು ಇದನ್ನು ಗುತ್ತಿಗೆದಾರರು ಟಿಪ್ಪರ್ ಮೂಲಕ ಶೆಟ್ಟಿಕೇರಿ-ಅಕ್ಕಿಗುಂದ ಮಾರ್ಗವಾಗಿ ಗದುಗಿನ ರಸ್ತೆಗೆ ಸಾಗಿಸುತ್ತಿದ್ದಾರೆ.<br>ಟಿಪ್ಪರ್ಗಳ ಅಧಿಕ ಭಾರಕ್ಕೆ ತಾಲ್ಲೂಕಿನ ರಸ್ತೆಗಳು ಹಾಳಾಗಿದ್ದು ಅನೇಕ ಕಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.</p>.<p>’ನಮ್ಮ ಊರಿನ ರಸ್ತೆಯ ಮೇಲೆ ನಮಗೆ ಓಡಾಡಲು ಆಗುತ್ತಿಲ್ಲ. ಅಷ್ಟೊಂದು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ</strong>: ತಾಲ್ಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ನಡುವಿರುವ ಮಾಲ್ಕಿ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೇ ಗುತ್ತಿಗೆದಾರರು ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದು ಅಧಿಕ ಭಾರಕ್ಕೆ ರಸ್ತೆಗಳು ಹಾಳಾಗುತ್ತಿವೆ ಎಂದು ಆರೋಪಿಸಿ ಬುಧವಾರ ಅಕ್ಕಿಗುಂದ ಗ್ರಾಮಸ್ಥರು ಟಿಪ್ಪರ್ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ಶೆಟ್ಟಿಕೇರಿ-ಅಕ್ಕಿಗುಂದ ಮಧ್ಯ ಅಕ್ಕಿಗುಂದ ಗುಡ್ಡದ ಹತ್ತಿರ ಮಾಲ್ಕಿ ಜಮೀನಿನಲ್ಲಿ ಯಾವುದೇ ಭಯ ಇಲ್ಲದೆ ಮಣ್ಣುಗಳ್ಳರು ಹಿಟಾಚಿಗಳ ಮೂಲಕ ನಿರಂತರವಾಗಿ ಮಣ್ಣನ್ನು ಲೂಟಿ ಮಾಡಲಾಗುತ್ತಿದ್ದಾರೆ. ಪ್ರತಿದಿನ ನೂರಾರು ಲೋಡ್ ಮಣ್ಣು ಇಲ್ಲಿಂದ ಸಾಗಾಟ ನಡೆಯುತ್ತಿದ್ದು ಇದನ್ನು ಗುತ್ತಿಗೆದಾರರು ಟಿಪ್ಪರ್ ಮೂಲಕ ಶೆಟ್ಟಿಕೇರಿ-ಅಕ್ಕಿಗುಂದ ಮಾರ್ಗವಾಗಿ ಗದುಗಿನ ರಸ್ತೆಗೆ ಸಾಗಿಸುತ್ತಿದ್ದಾರೆ.<br>ಟಿಪ್ಪರ್ಗಳ ಅಧಿಕ ಭಾರಕ್ಕೆ ತಾಲ್ಲೂಕಿನ ರಸ್ತೆಗಳು ಹಾಳಾಗಿದ್ದು ಅನೇಕ ಕಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.</p>.<p>’ನಮ್ಮ ಊರಿನ ರಸ್ತೆಯ ಮೇಲೆ ನಮಗೆ ಓಡಾಡಲು ಆಗುತ್ತಿಲ್ಲ. ಅಷ್ಟೊಂದು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>