ಭಾನುವಾರ, 27 ಜುಲೈ 2025
×
ADVERTISEMENT
ADVERTISEMENT

ಭಾವೈಕ್ಯ ಜಗತ್ತಿಗೆ ಹಬ್ಬಲಿ: ಫಕೀರ ಸಿದ್ಧರಾಮ ಶ್ರೀ

Published : 26 ಜುಲೈ 2025, 5:11 IST
Last Updated : 26 ಜುಲೈ 2025, 5:11 IST
ಫಾಲೋ ಮಾಡಿ
Comments
ದ್ವೇಷ ಬಿಡು ಪ್ರೀತಿ ಮಾಡು ಎಂಬ ನಾಣ್ನುಡಿಯನ್ನು ಜಗಕ್ಕೆ ಸಾರಿದ ಕರ್ತೃ ಜ.ಫಕೀರೇಶ್ವರರು ಪರಸ್ಪರ ಪ್ರೀತಿಯಿಂದ ಸಹೋದರರಂತೆ ಬಾಳಬೇಕೆಂದವರು
ಫಕೀರ ಸಿದ್ಧರಾಮ ಸ್ವಾಮೀಜಿ, ಜ.ಫಕೀರೇಶ್ವರಮಠ
ಭಾವೈಕ್ಯದ ಮಠ
ಹಿಂದೂ-ಮುಸ್ಲಿಂ ಭಾವೈಕ್ಯದ ಮಠವಾದ ಫಕೀರೇಶ್ವರರ ಮಠಕ್ಕೆ ಶಾಖಾ ಮಠಗಳು ಶಾಖಾ ಮಸೀದಿಗಳು ಇವೆ. ಸ್ಥಳೀಯ ಮಸೀದಿಯಲ್ಲಿ ಮೊಹರಂ ಹಬ್ಬವನ್ನು ಫಕೀರೇಶ್ವರ ಮಠದ ವತಿಯಿಂದ ನಡೆಸುತ್ತಿದೆ. ಪಾಂಜಾಗಳಿಗೆ ಹಿಂದೂ ಸಂಪ್ರದಾಯದಂತೆ ವಿಭೂತಿ ಹಚ್ಚಲಾಗುತ್ತದೆ ಎಂದು ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು. ಅಲ್ಲದೇ ಇದರ ಪೂಜೆ ಮಾಡುವವರು ಮುಸ್ಲಿಮರು. ದಸರಾ ಹಬ್ಬದಲ್ಲಿ ಬನ್ನಿ ಮುಡಿಯುವ ಕಾರ್ಯವನ್ನು ದರ್ಗಾದಿಂದಲೇ ಪ್ರಾರಂಭಿಸಲಾಗುತ್ತದೆ. ಇದು ಭಾವೈಕ್ಯದ ಸಂಕೇತವಾಗಿದೆ. ಫಕೀರೇಶ್ವರರ ಸಾಮರಸ್ಯದ ದ್ಯೋತಕವಾಗಿ ವೇಷಭೂಷಣದಲ್ಲೂ ನೋಡುವುದಾದರೆ ತಲೆಯ ಮೇಲೆ ಕೇಸರಿ ಪಠಗಾ ಕೊರಳಲ್ಲಿ ಹಸಿರು ಶಲ್ಯ ಜತೆಗೆ ಬಿಳಿ ಬಟ್ಟೆ ಕಾಣುತ್ತಿದ್ದು ಈ ಮೂರು ಬಣ್ಣ ಭಾರತ ದೇಶದ ಧ್ವಜದಲ್ಲಿ ಕಾಣಬಹುದಾಗಿದ್ದು ಕರ್ತೃ ಫಕೀರೇಶ್ವರರು ಇದರ ರೂವಾರಿಗಳಾಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT