<p><strong>ಗದಗ</strong>: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತನ್ನೇ ಬದಲಾವಣೆ ಮಾಡಬಹುದು. ರಾಧಾಕೃಷ್ಣನ್ ಅವರು ತತ್ವಜ್ಞಾನಿ, ಉತ್ತಮ ಶಿಕ್ಷಕರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕಿ ಶೈಲಜಾ ವಿ.ಜೋಶಿ ಹೇಳಿದರು.</p>.<p>ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿರುವ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಗುರುವಿನ ಮೇಲೆ ಗುರುತರ ಜವಾಬ್ದಾರಿ ಇರುತ್ತದೆ. ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಶಕ್ತಿ ಗುರುವಿಗಿದೆ’ ಎಂದರು.</p>.<p>ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ರುಕ್ಮಿಣಿ ಹಂಚಿನಾಳ, ಸುಲೇಮಾನ್ ನಡಿವಿನಮನಿ ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಅನಿಸಿಕೆ ಹಂಚಿಕೊಂಡರು. ಬಳಿಕ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶಾಲಾ ಶೈಕ್ಷಣಿಕ ಮಂಡಳಿಯ ಉಪಾಧ್ಯಕ್ಷ ಡಿ.ಬಿ.ಓದುಗೌಡರ, ಪ್ರಾಚಾರ್ಯ ವಿ.ಎ.ರಾಯಭಟ್ಟನವರ, ವೈ.ಆರ್.ಶೆಟ್ಟಿ ವೇದಿಕೆಯಲ್ಲಿದ್ದರು.</p>.<p>ಕಚೇರಿ ವ್ಯವಸ್ಥಾಪಕ ಚಂದ್ರಗೌಡ ಬಿ.ಪಾಟೀಲ, ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ, ಪ್ರಕಾಶ ಸರಮೊಕದಮ್ ಉಪಸ್ಥಿತರಿದ್ದರು.</p>.<p>ಶಿಕ್ಷಕಿ ಸುಜಾತಾ ಹಿರೇಗೌಡರ ಸ್ವಾಗತಿಸಿದರು. ಸರಿತಾ ಹೂಲಿಹಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಚೆನಮ್ ಮಾದಪ್ಪ ಹಾಗೂ ಸ್ವಪ್ನಾ ಸಂಗಮ ನಿರೂಪಿಸಿದರು. ವಾರಿಜಾ ಬಿ.ಎಚ್. ವಂದಿಸಿದರು.</p>.<p>ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><blockquote>ಶಿಕ್ಷಕ ವೃತ್ತಿ ಶ್ರೇಷ್ಠ ಹಾಗೂ ಗೌರವದ ಹುದ್ದೆಯಾಗಿದೆ. ಶಿಕ್ಷಕರಾಗುವುದು ಪುಣ್ಯದ ಕೆಲಸ. ಇದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ವೃತ್ತಿ.</blockquote><span class="attribution">– ಅನಿಲ ವೈದ್ಯ, ಶಾಲೆಯ ಶೈಕ್ಷಣಿಕ ಸಮಿತಿ ಚೇರ್ಮನ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಜಗತ್ತನ್ನೇ ಬದಲಾವಣೆ ಮಾಡಬಹುದು. ರಾಧಾಕೃಷ್ಣನ್ ಅವರು ತತ್ವಜ್ಞಾನಿ, ಉತ್ತಮ ಶಿಕ್ಷಕರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕಿ ಶೈಲಜಾ ವಿ.ಜೋಶಿ ಹೇಳಿದರು.</p>.<p>ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿರುವ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಗುರುವಿನ ಮೇಲೆ ಗುರುತರ ಜವಾಬ್ದಾರಿ ಇರುತ್ತದೆ. ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಶಕ್ತಿ ಗುರುವಿಗಿದೆ’ ಎಂದರು.</p>.<p>ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ರುಕ್ಮಿಣಿ ಹಂಚಿನಾಳ, ಸುಲೇಮಾನ್ ನಡಿವಿನಮನಿ ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಅನಿಸಿಕೆ ಹಂಚಿಕೊಂಡರು. ಬಳಿಕ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶಾಲಾ ಶೈಕ್ಷಣಿಕ ಮಂಡಳಿಯ ಉಪಾಧ್ಯಕ್ಷ ಡಿ.ಬಿ.ಓದುಗೌಡರ, ಪ್ರಾಚಾರ್ಯ ವಿ.ಎ.ರಾಯಭಟ್ಟನವರ, ವೈ.ಆರ್.ಶೆಟ್ಟಿ ವೇದಿಕೆಯಲ್ಲಿದ್ದರು.</p>.<p>ಕಚೇರಿ ವ್ಯವಸ್ಥಾಪಕ ಚಂದ್ರಗೌಡ ಬಿ.ಪಾಟೀಲ, ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ, ಪ್ರಕಾಶ ಸರಮೊಕದಮ್ ಉಪಸ್ಥಿತರಿದ್ದರು.</p>.<p>ಶಿಕ್ಷಕಿ ಸುಜಾತಾ ಹಿರೇಗೌಡರ ಸ್ವಾಗತಿಸಿದರು. ಸರಿತಾ ಹೂಲಿಹಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಚೆನಮ್ ಮಾದಪ್ಪ ಹಾಗೂ ಸ್ವಪ್ನಾ ಸಂಗಮ ನಿರೂಪಿಸಿದರು. ವಾರಿಜಾ ಬಿ.ಎಚ್. ವಂದಿಸಿದರು.</p>.<p>ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><blockquote>ಶಿಕ್ಷಕ ವೃತ್ತಿ ಶ್ರೇಷ್ಠ ಹಾಗೂ ಗೌರವದ ಹುದ್ದೆಯಾಗಿದೆ. ಶಿಕ್ಷಕರಾಗುವುದು ಪುಣ್ಯದ ಕೆಲಸ. ಇದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ವೃತ್ತಿ.</blockquote><span class="attribution">– ಅನಿಲ ವೈದ್ಯ, ಶಾಲೆಯ ಶೈಕ್ಷಣಿಕ ಸಮಿತಿ ಚೇರ್ಮನ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>