ಸ್ವಾಮಿ ವಿವೇಕಾನಂದರ ಮಾತಿನಂತೆ 'ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ಸಾಧಕ. ಶ್ರೀಗಳು ನಮ್ಮೊಂದಿಗೆ ಬದುಕಿದ್ದು, ಅವರ ಒಡನಾಟ ಸಿಕ್ಕಿದ್ದು ನಮ್ಮ ಪುಣ್ಯ. ತೋಂಟದಾರ್ಯ ಮಠದೊಂದಿಗೆ 35 ವರ್ಷದ ಒಡನಾಟವಿದ್ದು, ನನ್ನ ಮೇಲೆ ಲಿಂಗೈಕ್ಯ ಹಿರಿಯ ಶ್ರೀಗಳ ಆಶೀರ್ವಾದವಿದೆ. ಅವರ ಐಕ್ಯ ಮಂಟಪ ನಮ್ಮೆಲ್ಲರ ಭಕ್ತಿಭಾವಗಳು ಐಕ್ಯಗೊಳ್ಳುವ ಕೇಂದ್ರವಾಗಿದೆ ಎಂದು ಹೇಳಿದರು.