ಗದುಗಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಕೊಲೆ ಆದ ಸಂತ್ರಸ್ತರು ಹಾಗೂ ವಿನಯ್ ಕುಲಕರ್ಣಿ ಇಬ್ಬರು ಲಿಂಗಾಯಿತರೇ. ಸಿಬಿಐನವರು ವಿಚಾರಣೆ ನಡೆಸಿದ್ದು, ಅದು ನ್ಯಾಯ ಸಮ್ಮತವಾಗಿ ನಡೆಯಬೇಕು. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆ ಮತ್ತು ಗೌರವ ಇದ್ದು, ಸಿಬಿಐನವರು ಕೂಡ ನ್ಯಾಯಯುತವಾದ ವಿಚಾರಣೆ ನಡೆಸುತ್ತಾರೆ ಎಂಬ ಆಶಾಭಾವ ಇದೆ’ ಎಂದು ಹೇಳಿದರು.