‘ಅಂದು ಬಿಜೆಪಿಯ ನಾಯಕರು, ಇಂದಿನ ಸಿಎ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಗಲು, ರಾತ್ರಿ ಹೋರಾಟ, ಚಳವಳಿ, ಪ್ರತಿಭಟನೆ ನಡೆಸಿದ್ದರು. ನಿರ್ಣಯ ರದ್ದಾಗುತ್ತಿದ್ದಂತೆ ಜನರಿಂದ ಅಭಿನಂದನೆ ಪಡೆದಿದ್ದರು. ಆದರೆ, ಸದ್ಯ ಅವರೇ ಜಿಂದಾಲ್ ಕಂಪನಿಗೆ ಜಾಗ ನೀಡಲು ನಿರ್ಣಯ ತೆಗೆದುಕೊಂಡು, ನಂತರ ರದ್ದು ಮಾಡಿದ್ದಾರೆ’ ಎಂದು ಕುಟುಕಿದ್ದಾರೆ.