<p><strong>ಮುಂಡರಗಿ:</strong> ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಸೋಮನಗೌಡರ ಪಾಟೀಲ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದು, ಎಲ್ಲ ಕೃಷಿ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸುತ್ತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಡೋಣಿ ಗ್ರಾಮದಲ್ಲಿ ಏಳು ಎಕರೆ ನೀರಾವರಿ ಜಮೀನು ಹೊಂದಿರುವ ಲಕ್ಷ್ಮಿ ಅವರು ಅದರಲ್ಲಿಯೇ ವೈವಿಧ್ಯಮಯ ಬೆಳೆ ತೆಗೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ದೀರ್ಘಾವಧಿಯಲ್ಲಿ ಫಸಲು ನೀಡುವ ಗಿಡ, ಮರಗಳನ್ನು ಬೆಳೆದು ಆರ್ಥಿಕ ಸಂಕಷ್ಟವನ್ನು ದೂರವಾಗಿಸಿದ್ದಾರೆ.</p>.<p>ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದಿಂದ ಎಲ್ಲ ಖರ್ಚು ಕಳೆದು ₹20ಸಾವಿರ ಲಾಭ ಪಡೆದಿದ್ದಾರೆ. ತರಕಾರಿ ಬೆಳಗಳ ಮೂಲಕ ನಿಯಮಿತ ಆದಾಯ ಗಳಿಸುತ್ತಿದ್ದಾರೆ. ಎರಡು ಎಕರೆಯಲ್ಲಿ ತೆಂಗು ನಾಟಿ ಮಾಡಿದ್ದು, ಸದ್ಯ ತೆಂಗಿನ ಮರಗಳು ಚಿಕ್ಕದಿರುವ ಕಾರಣ ಅವುಗಳ ಮಧ್ಯದಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತೆಂಗಿನ ಮರಗಳೂ ತುಂಬಾ ಸೊಗಸಾಗಿ ಬೆಳೆಯುತ್ತಿವೆ.</p>.<p>ಡಂಬಳ ಹೋಬಳಿಯಲ್ಲಿ ತುಂಬಾ ವಿಶೇಷವಾದ ಪೇರಲ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದನ್ನರಿತ ಲಕ್ಷ್ಮಿ ತಮ್ಮ ಜಮೀನಿನ ಎರಡು ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ಪೇರಲ ಗಿಡಗಳನ್ನು ನೆಟ್ಟಿದ್ದು, ಈ ವರ್ಷ ಅವು ಭರಪೂರ ಫಲ ನೀಡಲಿವೆ. ಡಂಬಳ ಭಾಗದಲ್ಲಿ ಬೆಳೆದ ಪೇರಲ ಹಣ್ಣುಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಇದೆ.</p>.<p>ಎರಡೂವರೆ ಎಕರೆಯಲ್ಲಿ ಮಹಾಗನಿ ಗಿಡಗಳನ್ನು ನೆಟ್ಟಿದ್ದು, ದಶಕದ ನಂತರ ಅವುಗಳು ಲಕ್ಷಾಂತರ ರೂಪಾಯಿ ಆದಾಯ ನೀಡಲಿವೆ.</p>.<p>ಲಕ್ಷ್ಮಿ ಅವರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ನಿಭಾಯಿಸುತ್ತಿದ್ದು, ನಾಲ್ಕು ಹಸುಗಳನ್ನು ಸಾಕಿದ್ದಾರೆ. ಪತಿ ಸೋಮನಗೌಡರ ಹಾಗೂ ಕುಟುಂಬ ವರ್ಗದವರು ಲಕ್ಷ್ಮಿ ಅವರ ಕೃಷಿ ಕಾಯಕಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ.</p>.<p>ಕಷ್ಟಪಟ್ಟು ದುಡಿದರೆ ಯಾರಿಗಾದರೂ ಪ್ರತಿಫಲ ದೊರೆಯುತ್ತದೆ. ಮಹಿಳೆಯರು ಮನೆಗೆಲಸದ ನಂತರ ಕೃಷಿ ಕಾರ್ಯದಲ್ಲಿ ತೊಡಗಿ ಹಣ ಸಂಪಾದಿಸಬಹುದು </p><p>-ಲಕ್ಷ್ಮಿ ಪಾಟೀಲ ಕೃಷಿ ಮಹಿಳೆ ಡೋಣಿ</p>.<p><strong>ರಾಸಾಯನಿಕಗಳಿಂದ ದೂರ</strong> </p><p>ಲಕ್ಷ್ಮಿ ಅವರು ಬೆಳೆಗಳಿಗೆ ರಾಸಾಯನಿಕಗಳ ಬದಲಾಗಿ ಸಾವಯವಗಳನ್ನು ಬಳಸುತ್ತಿದ್ದಾರೆ. ಅವರೇ ಸಾಕಿರುವ ಹಸುಗಳ ಸಗಣಿ ಮತ್ತಿತರ ತ್ಯಾಜ್ಯವನ್ನು ಬೆಳೆಗಳಿಗೆ ನೀಡುತ್ತಿದ್ದಾರೆ. 2 ಲೀಟರ್ ಬೆಲ್ಲ 2 ಲೀಟರ್ ಹಿಟ್ಟು 10 ಲೀಟರ್ ಗೋಮೂತ್ರ ಮೊದಲಾದವುಗಳ ಮಿಶ್ರಣವನ್ನು 200 ಲೀಟರ್ ಬ್ಯಾರಲ್ನಲ್ಲಿ ನೆನೆಹಾಕಿ ಗೋಕೃಪಾಮೃತವನ್ನು ತಯಾರಿಸುತ್ತಾರೆ. ಈ ಮಿಶ್ರಣವು ಚೆನ್ನಾಗಿ ಕಳಿತ ನಂತರ ಅದನ್ನು ನೀರಿನೊಂದಿಗೆ ಬೆಳೆಗಳಿಗೆ ನೀಡುತ್ತಾರೆ. ಹೀಗಾಗಿ ಚೆನ್ನಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ:</strong> ತಾಲ್ಲೂಕಿನ ಡೋಣಿ ಗ್ರಾಮದ ಲಕ್ಷ್ಮಿ ಸೋಮನಗೌಡರ ಪಾಟೀಲ ಹಲವು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದು, ಎಲ್ಲ ಕೃಷಿ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿಭಾಯಿಸುತ್ತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಡೋಣಿ ಗ್ರಾಮದಲ್ಲಿ ಏಳು ಎಕರೆ ನೀರಾವರಿ ಜಮೀನು ಹೊಂದಿರುವ ಲಕ್ಷ್ಮಿ ಅವರು ಅದರಲ್ಲಿಯೇ ವೈವಿಧ್ಯಮಯ ಬೆಳೆ ತೆಗೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ದೀರ್ಘಾವಧಿಯಲ್ಲಿ ಫಸಲು ನೀಡುವ ಗಿಡ, ಮರಗಳನ್ನು ಬೆಳೆದು ಆರ್ಥಿಕ ಸಂಕಷ್ಟವನ್ನು ದೂರವಾಗಿಸಿದ್ದಾರೆ.</p>.<p>ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದಿಂದ ಎಲ್ಲ ಖರ್ಚು ಕಳೆದು ₹20ಸಾವಿರ ಲಾಭ ಪಡೆದಿದ್ದಾರೆ. ತರಕಾರಿ ಬೆಳಗಳ ಮೂಲಕ ನಿಯಮಿತ ಆದಾಯ ಗಳಿಸುತ್ತಿದ್ದಾರೆ. ಎರಡು ಎಕರೆಯಲ್ಲಿ ತೆಂಗು ನಾಟಿ ಮಾಡಿದ್ದು, ಸದ್ಯ ತೆಂಗಿನ ಮರಗಳು ಚಿಕ್ಕದಿರುವ ಕಾರಣ ಅವುಗಳ ಮಧ್ಯದಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತೆಂಗಿನ ಮರಗಳೂ ತುಂಬಾ ಸೊಗಸಾಗಿ ಬೆಳೆಯುತ್ತಿವೆ.</p>.<p>ಡಂಬಳ ಹೋಬಳಿಯಲ್ಲಿ ತುಂಬಾ ವಿಶೇಷವಾದ ಪೇರಲ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅದನ್ನರಿತ ಲಕ್ಷ್ಮಿ ತಮ್ಮ ಜಮೀನಿನ ಎರಡು ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ಪೇರಲ ಗಿಡಗಳನ್ನು ನೆಟ್ಟಿದ್ದು, ಈ ವರ್ಷ ಅವು ಭರಪೂರ ಫಲ ನೀಡಲಿವೆ. ಡಂಬಳ ಭಾಗದಲ್ಲಿ ಬೆಳೆದ ಪೇರಲ ಹಣ್ಣುಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಇದೆ.</p>.<p>ಎರಡೂವರೆ ಎಕರೆಯಲ್ಲಿ ಮಹಾಗನಿ ಗಿಡಗಳನ್ನು ನೆಟ್ಟಿದ್ದು, ದಶಕದ ನಂತರ ಅವುಗಳು ಲಕ್ಷಾಂತರ ರೂಪಾಯಿ ಆದಾಯ ನೀಡಲಿವೆ.</p>.<p>ಲಕ್ಷ್ಮಿ ಅವರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ನಿಭಾಯಿಸುತ್ತಿದ್ದು, ನಾಲ್ಕು ಹಸುಗಳನ್ನು ಸಾಕಿದ್ದಾರೆ. ಪತಿ ಸೋಮನಗೌಡರ ಹಾಗೂ ಕುಟುಂಬ ವರ್ಗದವರು ಲಕ್ಷ್ಮಿ ಅವರ ಕೃಷಿ ಕಾಯಕಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ.</p>.<p>ಕಷ್ಟಪಟ್ಟು ದುಡಿದರೆ ಯಾರಿಗಾದರೂ ಪ್ರತಿಫಲ ದೊರೆಯುತ್ತದೆ. ಮಹಿಳೆಯರು ಮನೆಗೆಲಸದ ನಂತರ ಕೃಷಿ ಕಾರ್ಯದಲ್ಲಿ ತೊಡಗಿ ಹಣ ಸಂಪಾದಿಸಬಹುದು </p><p>-ಲಕ್ಷ್ಮಿ ಪಾಟೀಲ ಕೃಷಿ ಮಹಿಳೆ ಡೋಣಿ</p>.<p><strong>ರಾಸಾಯನಿಕಗಳಿಂದ ದೂರ</strong> </p><p>ಲಕ್ಷ್ಮಿ ಅವರು ಬೆಳೆಗಳಿಗೆ ರಾಸಾಯನಿಕಗಳ ಬದಲಾಗಿ ಸಾವಯವಗಳನ್ನು ಬಳಸುತ್ತಿದ್ದಾರೆ. ಅವರೇ ಸಾಕಿರುವ ಹಸುಗಳ ಸಗಣಿ ಮತ್ತಿತರ ತ್ಯಾಜ್ಯವನ್ನು ಬೆಳೆಗಳಿಗೆ ನೀಡುತ್ತಿದ್ದಾರೆ. 2 ಲೀಟರ್ ಬೆಲ್ಲ 2 ಲೀಟರ್ ಹಿಟ್ಟು 10 ಲೀಟರ್ ಗೋಮೂತ್ರ ಮೊದಲಾದವುಗಳ ಮಿಶ್ರಣವನ್ನು 200 ಲೀಟರ್ ಬ್ಯಾರಲ್ನಲ್ಲಿ ನೆನೆಹಾಕಿ ಗೋಕೃಪಾಮೃತವನ್ನು ತಯಾರಿಸುತ್ತಾರೆ. ಈ ಮಿಶ್ರಣವು ಚೆನ್ನಾಗಿ ಕಳಿತ ನಂತರ ಅದನ್ನು ನೀರಿನೊಂದಿಗೆ ಬೆಳೆಗಳಿಗೆ ನೀಡುತ್ತಾರೆ. ಹೀಗಾಗಿ ಚೆನ್ನಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>