<p><strong>ಆಲೂರು:</strong> ತಾಲ್ಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷದಿಂದ ಮುಖ್ಯ ಶಿಕ್ಷಕರಾಗಿರುವ ಕೆ.ಎಲ್. ಪುರುಷೋತ್ತಮ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದೆ.</p><p>ತಮ್ಮ ಜೇಬಿನ ಹಣ ಹಾಕಿ ಜೊತೆಗೆ ಸಂಬಂಧಿಕರಿಂದಲೂ ಹಣದ ನೆರವು ಪಡೆದು ಅವರು ಸುಮಾರು ₹7.71 ಲಕ್ಷ ಮೌಲ್ಯದ ವಾಹನವನ್ನು ಮಕ್ಕಳಿಗಾಗಿ ಖರೀದಿಸಿದ್ದು, ಮಕ್ಕಳ ಸಂಖ್ಯೆಯು 19ರಿಂದ 43ಕ್ಕೆ ಏರಿದೆ. ಸಂಬಂಧಿಗಳಾದ ಹೇಮಲತಾ ಹರೀಶ್, ಗಾಯಿತ್ರಿ ಪುಟ್ಟರಾಜು, ಸಾರಿಕಾ ಮಧು, ಶ್ವೇತಾ ಗಿರೀಶ್, ಪುನೀತ್ ಕುಮಾರ್ ವಾಹನ ಖರೀದಿಸಲು ತಲಾ ₹ 10 ಸಾವಿರ ನೀಡಿದ್ದರು. ಉಳಿದ ಶೇ10 ರಷ್ಟು ಹಣವನ್ನು ಅವರು ಇತರರಿಂದ ಪಡೆದರು. ಮಕ್ಕಳು ನಿತ್ಯ ವಾಹನದಲ್ಲೇ ಶಾಲೆಗೆ ಬಂದು ಮನೆಗೆ ಹೋಗುತ್ತಾರೆ.</p><p>ವಾಹನ ಮುಖ್ಯಶಿಕ್ಷಕರ ಹೆಸರಿಗೆ ನೋಂದಣಿಯಾಗಿದೆ.ಶಾಲೆಗೆ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್, ಕಾಂಪೌಂಡ್ ಸೇರಿದಂತೆ ₹ 8 ಲಕ್ಷಕ್ಕೂ ಹೆಚ್ಚು ವೆಚ್ಚದ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ಪಡೆಯಲಾಗಿದೆ. ಶಾಲೆ ಮುಂದಿರುವ ಚರಂಡಿಗೆ ಸಿಮೆಂಟ್ ಸ್ಲ್ಯಾಬ್ ಹಾಕಿಸಲಾಗಿದೆ.</p><p>ಅವರ ಸಂಬಂಧಿಗಳು ಪ್ರತಿ ವರ್ಷ ಶಾಲೆ ಅಭಿವೃದ್ಧಿಗಾಗಿ ₹10ಸಾವಿರದಿಂದ ₹ 25 ಸಾವಿರ ದೇಣಿಗೆ ನೀಡುತ್ತಿದ್ದಾರೆ. ಶಿಕ್ಷಕಿ ಮಾರ್ಗರೇಟ್ ವಿಜಯ್ ಅವರು, ಪ್ರತಿ ವರ್ಷ ಶಾಲಾ ವಾಹನದ ವಿಮೆ ಕಂತು ಪಾವತಿಸುತ್ತಿದ್ದಾರೆ. ಚಾಲಕನನ್ನು ನೇಮಿಸಿದ್ದಾರೆ.</p><p>‘ಪ್ರಾರಂಭದಲ್ಲಿ ನಾನೇ ವಾಹನ ಚಾಲನೆ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಕರೆತರುತ್ತಿದ್ದೆ. ಎಲ್ಲ ಶಿಕ್ಷಕರು ಒಟ್ಟಾಗಿ ಚಾಲಕನಿಗೆ ₹ 8 ಸಾವಿರ ಸಂಬಳ ಪಾವತಿ ಮಾಡುತ್ತಿದ್ದೇವೆ’ ಎಂದು ಪುರುಷೋತ್ತಮ ಹೇಳಿದರು.</p><p>ಹೊನರಸೀಪುರ ತಾಲ್ಲೂಕಿನ ಕಬ್ಬಿನಹಳ್ಳಿಯ ಅವರು, ನಿವೃತ್ತ ಮುಖ್ಯ ಶಿಕ್ಷಕ ಕೆ. ಲಕ್ಮೇಗೌಡ–ಎಚ್.ಕೆ. ರುಕ್ಮಿಣಿ ದಂಪತಿ ಪುತ್ರ. ಸಹೋದರರೂ ಶಿಕ್ಷಕರಾಗಿದ್ದು, ಈ ಗೌರವ ದೊರೆತಿರುವುದು ಜಿಲ್ಲೆಗೆ, ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತಂದಿದೆ’ ಎಂದು ಪೋಷಕರು ಹೇಳಿದ್ದಾರೆ. ಮುಂದಿನ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪ್ರಾರಂಭವಾಗಲಿದೆ.</p>.<p><strong>ಮುಖ್ಯಮಂತ್ರಿ, ಶಿಕ್ಷಣ ಸಚಿವರ ಸಮ್ಮುಖದಲ್ಲಿ ಇಂದು ಪ್ರಶಸ್ತಿ ಪ್ರದಾನ</strong></p><p><strong>ಸ್ವತಃ ವಾಹನ ಚಾಲನೆ ಮಾಡಿ ಮಕ್ಕಳನ್ನು ಕರೆತರುತ್ತಿದ್ದ ಮುಖ್ಯ ಶಿಕ್ಷಕ</strong></p><p><strong>ಆಲೂರು ತಾಲ್ಲೂಕಿಗೆ ಲಭಿಸಿದ ಪ್ರಶಸ್ತಿ ಗರಿ: ಶಿಕ್ಷಕರಲ್ಲಿ ಸಂಭ್ರಮ</strong></p>.<div><blockquote>ಪುರುಷೋತ್ತಮ ಅವರು ಮುಖ್ಯ ಶಿಕ್ಷಕರಾಗಿ ಬಂದ ನಂತರ, ಎಲ್ಲರೂ ಸೇರಿ ಶಾಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ನಮ್ಮೂರಿನ ಹೆಮ್ಮೆ.</blockquote><span class="attribution">ಸುಮಿತ್ರಾ,ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ</span></div>.<div><blockquote>ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಮ್ಮ ಹಣ ಸೇರಿದಂತೆ ಹಲವು ದಾನಿಗಳಿಂದ ಸಹಾಯ ಪಡೆದು ಶಿಕ್ಷಣ ಮತ್ತು ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.</blockquote><span class="attribution">.ಜೆ.ಕೃಷ್ಣೇಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು:</strong> ತಾಲ್ಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷದಿಂದ ಮುಖ್ಯ ಶಿಕ್ಷಕರಾಗಿರುವ ಕೆ.ಎಲ್. ಪುರುಷೋತ್ತಮ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದೆ.</p><p>ತಮ್ಮ ಜೇಬಿನ ಹಣ ಹಾಕಿ ಜೊತೆಗೆ ಸಂಬಂಧಿಕರಿಂದಲೂ ಹಣದ ನೆರವು ಪಡೆದು ಅವರು ಸುಮಾರು ₹7.71 ಲಕ್ಷ ಮೌಲ್ಯದ ವಾಹನವನ್ನು ಮಕ್ಕಳಿಗಾಗಿ ಖರೀದಿಸಿದ್ದು, ಮಕ್ಕಳ ಸಂಖ್ಯೆಯು 19ರಿಂದ 43ಕ್ಕೆ ಏರಿದೆ. ಸಂಬಂಧಿಗಳಾದ ಹೇಮಲತಾ ಹರೀಶ್, ಗಾಯಿತ್ರಿ ಪುಟ್ಟರಾಜು, ಸಾರಿಕಾ ಮಧು, ಶ್ವೇತಾ ಗಿರೀಶ್, ಪುನೀತ್ ಕುಮಾರ್ ವಾಹನ ಖರೀದಿಸಲು ತಲಾ ₹ 10 ಸಾವಿರ ನೀಡಿದ್ದರು. ಉಳಿದ ಶೇ10 ರಷ್ಟು ಹಣವನ್ನು ಅವರು ಇತರರಿಂದ ಪಡೆದರು. ಮಕ್ಕಳು ನಿತ್ಯ ವಾಹನದಲ್ಲೇ ಶಾಲೆಗೆ ಬಂದು ಮನೆಗೆ ಹೋಗುತ್ತಾರೆ.</p><p>ವಾಹನ ಮುಖ್ಯಶಿಕ್ಷಕರ ಹೆಸರಿಗೆ ನೋಂದಣಿಯಾಗಿದೆ.ಶಾಲೆಗೆ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್, ಕಾಂಪೌಂಡ್ ಸೇರಿದಂತೆ ₹ 8 ಲಕ್ಷಕ್ಕೂ ಹೆಚ್ಚು ವೆಚ್ಚದ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ಪಡೆಯಲಾಗಿದೆ. ಶಾಲೆ ಮುಂದಿರುವ ಚರಂಡಿಗೆ ಸಿಮೆಂಟ್ ಸ್ಲ್ಯಾಬ್ ಹಾಕಿಸಲಾಗಿದೆ.</p><p>ಅವರ ಸಂಬಂಧಿಗಳು ಪ್ರತಿ ವರ್ಷ ಶಾಲೆ ಅಭಿವೃದ್ಧಿಗಾಗಿ ₹10ಸಾವಿರದಿಂದ ₹ 25 ಸಾವಿರ ದೇಣಿಗೆ ನೀಡುತ್ತಿದ್ದಾರೆ. ಶಿಕ್ಷಕಿ ಮಾರ್ಗರೇಟ್ ವಿಜಯ್ ಅವರು, ಪ್ರತಿ ವರ್ಷ ಶಾಲಾ ವಾಹನದ ವಿಮೆ ಕಂತು ಪಾವತಿಸುತ್ತಿದ್ದಾರೆ. ಚಾಲಕನನ್ನು ನೇಮಿಸಿದ್ದಾರೆ.</p><p>‘ಪ್ರಾರಂಭದಲ್ಲಿ ನಾನೇ ವಾಹನ ಚಾಲನೆ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಕರೆತರುತ್ತಿದ್ದೆ. ಎಲ್ಲ ಶಿಕ್ಷಕರು ಒಟ್ಟಾಗಿ ಚಾಲಕನಿಗೆ ₹ 8 ಸಾವಿರ ಸಂಬಳ ಪಾವತಿ ಮಾಡುತ್ತಿದ್ದೇವೆ’ ಎಂದು ಪುರುಷೋತ್ತಮ ಹೇಳಿದರು.</p><p>ಹೊನರಸೀಪುರ ತಾಲ್ಲೂಕಿನ ಕಬ್ಬಿನಹಳ್ಳಿಯ ಅವರು, ನಿವೃತ್ತ ಮುಖ್ಯ ಶಿಕ್ಷಕ ಕೆ. ಲಕ್ಮೇಗೌಡ–ಎಚ್.ಕೆ. ರುಕ್ಮಿಣಿ ದಂಪತಿ ಪುತ್ರ. ಸಹೋದರರೂ ಶಿಕ್ಷಕರಾಗಿದ್ದು, ಈ ಗೌರವ ದೊರೆತಿರುವುದು ಜಿಲ್ಲೆಗೆ, ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತಂದಿದೆ’ ಎಂದು ಪೋಷಕರು ಹೇಳಿದ್ದಾರೆ. ಮುಂದಿನ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪ್ರಾರಂಭವಾಗಲಿದೆ.</p>.<p><strong>ಮುಖ್ಯಮಂತ್ರಿ, ಶಿಕ್ಷಣ ಸಚಿವರ ಸಮ್ಮುಖದಲ್ಲಿ ಇಂದು ಪ್ರಶಸ್ತಿ ಪ್ರದಾನ</strong></p><p><strong>ಸ್ವತಃ ವಾಹನ ಚಾಲನೆ ಮಾಡಿ ಮಕ್ಕಳನ್ನು ಕರೆತರುತ್ತಿದ್ದ ಮುಖ್ಯ ಶಿಕ್ಷಕ</strong></p><p><strong>ಆಲೂರು ತಾಲ್ಲೂಕಿಗೆ ಲಭಿಸಿದ ಪ್ರಶಸ್ತಿ ಗರಿ: ಶಿಕ್ಷಕರಲ್ಲಿ ಸಂಭ್ರಮ</strong></p>.<div><blockquote>ಪುರುಷೋತ್ತಮ ಅವರು ಮುಖ್ಯ ಶಿಕ್ಷಕರಾಗಿ ಬಂದ ನಂತರ, ಎಲ್ಲರೂ ಸೇರಿ ಶಾಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ನಮ್ಮೂರಿನ ಹೆಮ್ಮೆ.</blockquote><span class="attribution">ಸುಮಿತ್ರಾ,ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ</span></div>.<div><blockquote>ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಮ್ಮ ಹಣ ಸೇರಿದಂತೆ ಹಲವು ದಾನಿಗಳಿಂದ ಸಹಾಯ ಪಡೆದು ಶಿಕ್ಷಣ ಮತ್ತು ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.</blockquote><span class="attribution">.ಜೆ.ಕೃಷ್ಣೇಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>