ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘15 ವರ್ಷ ಗಿಳಿಯ ಹಾಗೆ ಸಾಕಿದೆ. ಆದರೆ, ಅದು ನನಗೆ ಮೋಸ ಮಾಡಿದೆ. ನಾನು ಸಚಿವನಾಗಿದ್ದಾಗ ಅರಸೀಕೆರೆಗೆ ಎಂಜಿನಿಯರಿಂಗ್ ಕಾಲೇಜು, ವಿದ್ಯುತ್ ಸೌಲಭ್ಯ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಿದ್ದೆ. ಆದರೆ, ನಾನು ಏನೂ ಮಾಡಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಜೆಲ್ಲೆಯ ಅಭಿವದ್ಧಿಗೆ ಹೆಚ್ಚು ಶ್ರಮಿಸಿದ್ದೇವೆ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸದೆ ಪೊಲೀಸರ ಬಂದೋಬಸ್ತ್ನಲ್ಲಿ ತುಮಕೂರಿಗೆ ನೀರು ತೆಗೆದುಕೊಂಡು ಹೋದರು. ಈಗ ಜಿಲ್ಲೆಯ ಜನರ ಬಳಿ ಮತವನ್ನು ಹೇಗೆ ಕೇಳುತ್ತಾರೆ? ಜಿಲ್ಲಾ ಮಂತ್ರಿಗೆ ಬುದ್ಧಿ ಕಲಿಸಲು ನಿಮಗೆ ಸರಿಯಾದ ಸಮಯವಿದು’ ಎಂದರು.