ಸಕಲೇಶಪುರ: ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಡಾನೆಗಳು ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗ್ರಾಮ ಪಂಚಾಯಿತಿ ಮುಂಭಾಗದ ಮುಖ್ಯ ರಸ್ತೆಯಲ್ಲೇ ಕೆಲವು ನಡೆದು ಬಂದರೆ, ಮತ್ತೊಂದು ಆನೆ ಜನನಿಬಿಡ ರಸ್ತೆಯಲ್ಲಿಯೇ ಸುಮಾರು ಅರ್ಧ ಕಿ.ಮೀ. ದೂರ ಸಾಗಿತು. ಪಾದಚಾರಿಗಳು, ಮನೆಯಂಗಳದಲ್ಲಿದ್ದವರು ಹೆದರಿ ಓಡಿ ಹೋದರು.
‘ಕಾಡಾನೆಗಳು ಭತ್ತದ ಸಸಿ ಮಡಿಗಳನ್ನು ತುಳಿಯುತ್ತವೆ. ಪೈರನ್ನು ತಿಂದುಹಾಕುತ್ತವೆ. ಕಟಾವು ಹಂತಕ್ಕೆ ಬಂದ ಬೆಳೆಯನ್ನೂ ನಾಶ ಮಾಡುತ್ತವೆ. ಹೀಗಾಗಿ ಭತ್ತ ಬೆಳೆಯುವುದನ್ನೇ ನಿಲ್ಲಿಸಬೇಕಾಗಿದೆ’ ಎಂದು ಹಲಸುಲಿಗೆಯ ರೈತ ಎಚ್.ವಿ. ಗಿರೀಶ್ ಅಲವತ್ತುಕೊಂಡರು.
‘ಆನೆಗಳು ಕದಲೇ ನಿಲ್ಲುವುದರಿಂದ ಕಾಫಿ ತೋಟಕ್ಕೆ ಹೋಗಲು ಹಿಂಜರಿಯುವಂತಾಗಿದೆ. ತೋಟದಲ್ಲಿ ಅನೇಕ ಕೆಲಸಗಳು ಬಾಕಿ ಉಳಿದಿವೆ. ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ’ ಎಂದು ಹಸಿಡೆ ಗ್ರಾಮದ ರೈತರ ದಯಾನಂದ್ ಹೇಳಿದರು.