<p><strong>ಹಳೇಬೀಡು</strong>: ರೈತರು ಓಡಾಡುವ ಬೇಲೂರು ರಸ್ತೆ ಜಮೀನು ಪಕ್ಕದ ಏರಿಯಲ್ಲಿ ವಿದ್ಯುತ್ ಲೈನ್ ಕೆಳಕ್ಕೆ ಜಗ್ಗುತ್ತಿದ್ದು ಅಪಾಯದ ಸ್ಥಿತಿಯಲ್ಲಿದೆ.</p>.<p>ಏರಿ ಮೇಲೆ ವಿದ್ಯುತ್ ತಂತಿ ಕೈಗೆ ಎಟುಕುವಂತಿದೆ. ಗಿಡ ಗಂಟಿಗಳು ತಂತಿಗೆ ತಗುಲುವಂತೆ ಬೆಳೆಯುತ್ತಿವೆ. ಇವು ಸ್ಪರ್ಶಿಸಿದರೆ ಭೂಮಿ ಮೇಲೆ ವಿದ್ಯುತ್ ಹರಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.</p>.<p> ವಿದ್ಯುತ್ ಪರಿವರ್ತಕಕ್ಕೆ ಬಂದಿರುವ 11 ಕೆವಿ ಸಾಮರ್ಥ್ಯ ಹೊಂದಿದೆ. ಸೆಸ್ಕ್ ಕಂಪೆನಿ ಎಂಜಿನಿಯರ್ಗಳಿಗೆ ಹಲವು ಬಾರಿ ತಿಳಿಸಿದರೂ ಕೆಲಸ ಪ್ರಯೋಜನವಾಗಿಲ್ಲ. ಕೂಡಲೆ ಸೆಸ್ಕ್ ಅಧಿಕಾರಿಗಳು ಸರಿಪಡಿಸಬೇಕು ಎಂದು ರೈತ ಈಶ್ವರಪ್ಪ ವಿನಂತಿಸಿಕೊಂಡಿದ್ದಾರೆ.</p>.<p>‘ವಿದ್ಯುತ್ ತಂತಿಗಳು ಭೂಮಿಗೆ ಮುಟ್ಟುವ ಸ್ಥಿತಿಗೆ ತಲುಪಿ ವರ್ಷ ಕಳೆದಿದೆ. ತಂತಿಗಳನ್ನು ಬಿಗಿ ಮಾಡದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ಅಧ್ಯಕ್ಷರು ಹಾಗೂ ಪಿಡಿಒ ಅವರಿಂದ ತಂತಿ ಸರಿಪಡಿಸುವ ಕುರಿತು ಸೆಸ್ಕ್ ಕಂಪೆನಿಗೆ ಪತ್ರ ಬರೆಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್.ಎಚ್.ಎಂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು</strong>: ರೈತರು ಓಡಾಡುವ ಬೇಲೂರು ರಸ್ತೆ ಜಮೀನು ಪಕ್ಕದ ಏರಿಯಲ್ಲಿ ವಿದ್ಯುತ್ ಲೈನ್ ಕೆಳಕ್ಕೆ ಜಗ್ಗುತ್ತಿದ್ದು ಅಪಾಯದ ಸ್ಥಿತಿಯಲ್ಲಿದೆ.</p>.<p>ಏರಿ ಮೇಲೆ ವಿದ್ಯುತ್ ತಂತಿ ಕೈಗೆ ಎಟುಕುವಂತಿದೆ. ಗಿಡ ಗಂಟಿಗಳು ತಂತಿಗೆ ತಗುಲುವಂತೆ ಬೆಳೆಯುತ್ತಿವೆ. ಇವು ಸ್ಪರ್ಶಿಸಿದರೆ ಭೂಮಿ ಮೇಲೆ ವಿದ್ಯುತ್ ಹರಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.</p>.<p> ವಿದ್ಯುತ್ ಪರಿವರ್ತಕಕ್ಕೆ ಬಂದಿರುವ 11 ಕೆವಿ ಸಾಮರ್ಥ್ಯ ಹೊಂದಿದೆ. ಸೆಸ್ಕ್ ಕಂಪೆನಿ ಎಂಜಿನಿಯರ್ಗಳಿಗೆ ಹಲವು ಬಾರಿ ತಿಳಿಸಿದರೂ ಕೆಲಸ ಪ್ರಯೋಜನವಾಗಿಲ್ಲ. ಕೂಡಲೆ ಸೆಸ್ಕ್ ಅಧಿಕಾರಿಗಳು ಸರಿಪಡಿಸಬೇಕು ಎಂದು ರೈತ ಈಶ್ವರಪ್ಪ ವಿನಂತಿಸಿಕೊಂಡಿದ್ದಾರೆ.</p>.<p>‘ವಿದ್ಯುತ್ ತಂತಿಗಳು ಭೂಮಿಗೆ ಮುಟ್ಟುವ ಸ್ಥಿತಿಗೆ ತಲುಪಿ ವರ್ಷ ಕಳೆದಿದೆ. ತಂತಿಗಳನ್ನು ಬಿಗಿ ಮಾಡದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ಅಧ್ಯಕ್ಷರು ಹಾಗೂ ಪಿಡಿಒ ಅವರಿಂದ ತಂತಿ ಸರಿಪಡಿಸುವ ಕುರಿತು ಸೆಸ್ಕ್ ಕಂಪೆನಿಗೆ ಪತ್ರ ಬರೆಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್.ಎಚ್.ಎಂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>