ವಿದ್ಯಾರ್ಥಿ ಶಶಾಂಕ್ ಮಾತನಾಡಿ, ‘ಹಿಂದಿನ ವರ್ಷದ ಪಾಸ್ ಹಾಗೂ ಕಾಲೇಜು ಶುಲ್ಕದ ರಶೀದಿ ತೋರಿಸಿ ಬಸ್ನಲ್ಲಿ ಸಂಚರಿಸಬಹುದು ಎಂದು ಸರ್ಕಾರ ತಿಳಿಸಿದ್ದರೂ ಸಹ ಪಿರಿಯಾಪಟ್ಟಣ ಡಿಪೊಗೆ ಸೇರಿದ ಬಸ್ ನಿರ್ವಾಹಕರು ನಮಗೆ ಪ್ರತ್ಯೇಕವಾಗಿ ಯಾವುದೇ ಆದೇಶ ಬಂದಿಲ್ಲ. ಮೇಲಧಿಕಾರಿಗಳು ಸಹ ತಿಳಿಸಿಲ್ಲ ಆದಕಾರಣ ಟಿಕೆಟ್ ಪಡೆಯಲೇಬೇಕು ಎಂದು ಪಟ್ಟು ಹಿಡಿದು, ಹಾಸನಕ್ಕೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳಿಂದ ಹಣ ಪಡೆದು ಟಿಕೆಟ್ ನೀಡಿದ್ದಾರೆ. ಇದರಿಂದ ನಮಗೆ ಬೇಸರವಾಗಿದ್ದು ಟಿಕೆಟ್ ಹಣವನ್ನು ಹಿಂದಿರುಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.