ಸಂಘದ ಗೌರವಾಧ್ಯಕ್ಷ ದೊರೆರಾಜು ಮಾತನಾಡಿ, ಸೈನಿಕರು ಹುತಾತ್ಮರಾದಾಗ ಅಂತ್ಯಸಂಸ್ಕಾರದ ವರೆಗೆ ಮಾತ್ರ ಜನ, ರಾಜಕಾರಣಿಗಳು, ಅಧಿಕಾರಿಗಳು ಇರುತ್ತಾರೆ. ಬಳಿಕ ಮಾಜಿ ಸೈನಿಕರ ಮತ್ತು ಅವರ ಕುಟುಂಬದ ಸಮಸ್ಯೆಗಳನ್ನು ಕೇಳಲು ಯಾರೂ ಬರುವುದಿಲ್ಲ. ಸೌಲಭ್ಯಗಳಿಗೆ ಕಚೇರಿ ಅಲೆಯಬೇಕಿದೆ. ಬಹುತೇಕ ಕಚೇರಿಗಳಲ್ಲಿ ನೌಕರರು ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಕನಿಷ್ಟ ಗೌರವ ಸಹ ನೀಡುವುದಿಲ್ಲ ಎಂದು
ಹೇಳಿದರು.