‘ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ಬುದ್ಧ, ಬಸವ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವೆಚ್ಚ, ಹೊಯ್ಸಳ ಲಾಂಛನ, ಅಂಗಡಿ ಮಳಿಗೆಗೆಳ ನಿರ್ಮಾಣಕ್ಕೆಬಳಕೆಯಾಗಿದೆ ಎಂದು ತೋರಿಸಲಾಗಿದೆ. ಸಾರ್ವಜನಿಕ ಟೆಂಡರ್ ಕರೆಯದೇ ತಮಗೆ ಬೇಕಾದವರಿಗೆ ನೀಡಲಾಗಿದೆ. ಬಾಡಿಗೆ ಹಣವನ್ನು ನಿಯಮ ಪ್ರಕಾರ ಪರಿಷತ್ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು. ನಾಲ್ಕು ಮಳಿಗೆಯಿಂದ ಬಂದ ₹ 17.25 ಲಕ್ಷಕ್ಕೂ ಅಧಿಕ ಹಣ ಖಾತೆಯಲ್ಲಿ ಇಲ್ಲ. ಈಗ ಖಾತೆಯಲ್ಲಿ ಉಳಿದಿರುವುದು ₹ 1,058 ಮಾತ್ರ. ಉಳಿದ ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.