<p><strong>ಸಕಲೇಶಪುರ</strong>: ಇಲ್ಲಿಯ ಬೈಪಾಸ್ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 75ರಲ್ಲಿ ಕಡಿಮೆ ಎತ್ತರದ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿರುವುದರಿಂದ ಮಂಗಳೂರಿಗೆ ಟ್ಯಾಂಕ್ ಹೊತ್ತು ಸಾಗುತ್ತಿದ್ದ ಲಾರಿಯೊಂದು ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಒಂದು ಕಿ.ಮೀ. ಹಿಂಬದಿ ಬಂದು ಪಟ್ಟಣದೊಳಗೆ ಜಖಂಗೊಂಡಿದೆ.</p><p>ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಸರಕು ಸಾಗಣೆ ಮಾಡುವುದಕ್ಕೆ ಬಳಕೆ ಆಗುತ್ತಿರುವ ಜೀವನಾಡಿ. ಇಂತಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಬೈಪಾಸ್ನಲ್ಲಿ ಹಾಲೇಬೇಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆದ್ದಾರಿ ಪ್ರಾಧಿಕಾರದಿಂದ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ.</p><p>ಮಂಗಳವಾರ ಲಾರಿ ಹಾಗೂ ಲಾರಿಯ ಮೇಲೆ ಹೊತ್ತ ಟ್ಯಾಂಕರ್ ಸೇರಿ ಕೇವಲ 16 ಅಡಿ ಎತ್ತರವಿದ್ದು, ಈ ಸೇತುವೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಉದ್ದ ಹಾಗೂ ಎತ್ತರದ ಟ್ಯಾಂಕ್ ಹೊತ್ತ ಕಾರಣ ಕೊಲ್ಲಹಳ್ಳವರೆಗೂ ಹಿಂಬದಿ ಬಂದು, ಸಕಲೇಶಪುರ ಪಟ್ಟಣದೊಳಗೆ ಹಾದು ಹೋಗಿರುವ ಹಳೆ ಹೆದ್ದಾರಿಯ ಮೂಲಕ ಸಂಚಾರ ಮಾಡಬೇಕಾಯಿತು.</p><p>ಆದರೆ ಹಳೆ ಹೆದ್ದಾರಿಯಿಂದ ಚತುಷ್ಪಥಕ್ಕೆ ಹೋಗುತ್ತಿದ್ದಾಗ, ಕೆಂಪೇಗೌಡ ಪ್ರತಿಮೆ ಸಮೀಪ ಲಾರಿ ಜಖಂಗೊಡಿತ್ತು. ಪ್ರತಿಮೆ ಮುಂಭಾಗದಲ್ಲಿ ಹಾಕಲಾಗಿದ್ದ ಇಂಟರ್ ಲಾಕ್ ಪುಡಿ ಪುಡಿಯಾಗಿ ಆ ಪ್ರದೇಶದಲ್ಲಿ ಹೊಂಡವೇ ನಿರ್ಮಾಣವಾಯಿತು.</p><p>ಇಡೀ ದೇಶದಲ್ಲಿ ಹೆದ್ದಾರಿಗಳನ್ನು ವೈಜ್ಞಾನಿಕವಾಗಿಯೂ, ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಾಸನದಿಂದ ಮಾರನಹಳ್ಳಿವರೆಗೂ ಕೇವಲ 45 ಕಿ.ಮೀ. ಉದ್ದ ಚತುಷ್ಪಥವನ್ನು 2017 ರಿಂದ ಆಮೆ ಗತಿಯಲ್ಲಿ ಮಾಡಲಾಗುತ್ತಿದೆ.</p>.<p>ಮಾಡಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಂದರಿನಿಂದ ಸರಕುಗಳನ್ನು ಹೊತ್ತು ಸಾಗುವ ಲಾರಿಗಳ ಸಂಚಾರಕ್ಕೆ ಅಗತ್ಯ ಎತ್ತರದ ಸೇತುವೆಯನ್ನೂ ಮಾಡಿಲ್ಲ. ಹೆದ್ದಾರಿ ಎಂಜಿನಿಯರ್ಗಳು ಎಷ್ಟೊಂದು ಬೇಜವಾಬ್ದಾರಿಯಿಂದ ಕಾಮಗಾರಿ ಮಾಡಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ ಎಂದು ಲಾರಿ ಚಾಲಕರು ಅಲವತ್ತಿಕೊಳ್ಳುತ್ತಿದ್ದಾರೆ.</p>.<p> ಅನಕ್ಷರಸ್ಥರೂ ಅಚ್ಚುಕಟ್ಟಾಗಿ ಕಟ್ಟಡ ಕಟ್ಟುತ್ತಾರೆ. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು ಪದವಿ ಪಡೆದಿದ್ದಾರೋ ಎಂಬ ಅನುಮಾನ ಹುಟ್ಟುತ್ತಿದೆ. ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲು ಮಾಡಬೇಕು. </p><p><strong>-ಜೈ ಮಾರುತಿ ದೇವರಾಜ್ ಜೇನು ಪೋಷಕರ ಸಹಕಾರ ಸಂಘ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong>: ಇಲ್ಲಿಯ ಬೈಪಾಸ್ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 75ರಲ್ಲಿ ಕಡಿಮೆ ಎತ್ತರದ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿರುವುದರಿಂದ ಮಂಗಳೂರಿಗೆ ಟ್ಯಾಂಕ್ ಹೊತ್ತು ಸಾಗುತ್ತಿದ್ದ ಲಾರಿಯೊಂದು ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಒಂದು ಕಿ.ಮೀ. ಹಿಂಬದಿ ಬಂದು ಪಟ್ಟಣದೊಳಗೆ ಜಖಂಗೊಂಡಿದೆ.</p><p>ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಸರಕು ಸಾಗಣೆ ಮಾಡುವುದಕ್ಕೆ ಬಳಕೆ ಆಗುತ್ತಿರುವ ಜೀವನಾಡಿ. ಇಂತಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಬೈಪಾಸ್ನಲ್ಲಿ ಹಾಲೇಬೇಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೆದ್ದಾರಿ ಪ್ರಾಧಿಕಾರದಿಂದ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ.</p><p>ಮಂಗಳವಾರ ಲಾರಿ ಹಾಗೂ ಲಾರಿಯ ಮೇಲೆ ಹೊತ್ತ ಟ್ಯಾಂಕರ್ ಸೇರಿ ಕೇವಲ 16 ಅಡಿ ಎತ್ತರವಿದ್ದು, ಈ ಸೇತುವೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಉದ್ದ ಹಾಗೂ ಎತ್ತರದ ಟ್ಯಾಂಕ್ ಹೊತ್ತ ಕಾರಣ ಕೊಲ್ಲಹಳ್ಳವರೆಗೂ ಹಿಂಬದಿ ಬಂದು, ಸಕಲೇಶಪುರ ಪಟ್ಟಣದೊಳಗೆ ಹಾದು ಹೋಗಿರುವ ಹಳೆ ಹೆದ್ದಾರಿಯ ಮೂಲಕ ಸಂಚಾರ ಮಾಡಬೇಕಾಯಿತು.</p><p>ಆದರೆ ಹಳೆ ಹೆದ್ದಾರಿಯಿಂದ ಚತುಷ್ಪಥಕ್ಕೆ ಹೋಗುತ್ತಿದ್ದಾಗ, ಕೆಂಪೇಗೌಡ ಪ್ರತಿಮೆ ಸಮೀಪ ಲಾರಿ ಜಖಂಗೊಡಿತ್ತು. ಪ್ರತಿಮೆ ಮುಂಭಾಗದಲ್ಲಿ ಹಾಕಲಾಗಿದ್ದ ಇಂಟರ್ ಲಾಕ್ ಪುಡಿ ಪುಡಿಯಾಗಿ ಆ ಪ್ರದೇಶದಲ್ಲಿ ಹೊಂಡವೇ ನಿರ್ಮಾಣವಾಯಿತು.</p><p>ಇಡೀ ದೇಶದಲ್ಲಿ ಹೆದ್ದಾರಿಗಳನ್ನು ವೈಜ್ಞಾನಿಕವಾಗಿಯೂ, ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಾಸನದಿಂದ ಮಾರನಹಳ್ಳಿವರೆಗೂ ಕೇವಲ 45 ಕಿ.ಮೀ. ಉದ್ದ ಚತುಷ್ಪಥವನ್ನು 2017 ರಿಂದ ಆಮೆ ಗತಿಯಲ್ಲಿ ಮಾಡಲಾಗುತ್ತಿದೆ.</p>.<p>ಮಾಡಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಂದರಿನಿಂದ ಸರಕುಗಳನ್ನು ಹೊತ್ತು ಸಾಗುವ ಲಾರಿಗಳ ಸಂಚಾರಕ್ಕೆ ಅಗತ್ಯ ಎತ್ತರದ ಸೇತುವೆಯನ್ನೂ ಮಾಡಿಲ್ಲ. ಹೆದ್ದಾರಿ ಎಂಜಿನಿಯರ್ಗಳು ಎಷ್ಟೊಂದು ಬೇಜವಾಬ್ದಾರಿಯಿಂದ ಕಾಮಗಾರಿ ಮಾಡಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ ಎಂದು ಲಾರಿ ಚಾಲಕರು ಅಲವತ್ತಿಕೊಳ್ಳುತ್ತಿದ್ದಾರೆ.</p>.<p> ಅನಕ್ಷರಸ್ಥರೂ ಅಚ್ಚುಕಟ್ಟಾಗಿ ಕಟ್ಟಡ ಕಟ್ಟುತ್ತಾರೆ. ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು ಪದವಿ ಪಡೆದಿದ್ದಾರೋ ಎಂಬ ಅನುಮಾನ ಹುಟ್ಟುತ್ತಿದೆ. ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲು ಮಾಡಬೇಕು. </p><p><strong>-ಜೈ ಮಾರುತಿ ದೇವರಾಜ್ ಜೇನು ಪೋಷಕರ ಸಹಕಾರ ಸಂಘ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>