ಬೇಲೂರು: ಕಾಡುಕೋಣ ಪ್ರತ್ಯಕ್ಷ, ರೈತರಲ್ಲಿ ಆತಂಕ

ಬೇಲೂರು (ಹಾಸನ): ತಾಲ್ಲೂಕಿನ ಗೆಂಡೇಹಳ್ಳಿ ಗ್ರಾಮದ ಸಮೀಪ, ಮಂಗಳವಾರ ಕಾಡುಕೋಣವೊಂದು ಕಾಣಿಸಿಕೊಂಡಿದೆ.
ಈಗಾಗಲೇ ಕಾಡಾನೆಗಳ ಉಪಟಳದಿಂದ ಬೇಸತ್ತ ಕಾಫಿ ಬೆಳೆಗಾರರು ಮತ್ತು ರೈತರು, ಇದೀಗ ಕಾಡುಕೋಣ ಪ್ರತ್ಯಕ್ಷವಾಗಿರುವುದರಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
‘ಕಾಡಾನೆ, ಕಾಡುಹಂದಿ, ಮಂಗ, ನವಿಲುಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಇದೀಗ ಕಾಡುಕೋಣವೂ ಬಂದಿದ್ದು, ಕಾಡಾನೆಗಳಿಗಿಂತ ಹೆಚ್ಚಿನ ತೊಂದರೆಯಾಗಲಿದೆ’ ಎಂದು ಕಾಫಿ ಬೆಳೆಗಾರ ಶ್ರೀನಿವಾಸ್ ಅಲವತ್ತುಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.