‘ಹಾಸನ–ಬಿ.ಸಿ. ರಸ್ತೆ ನಡುವೆಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. 2017ರಲ್ಲಿಯೇ ಗುತ್ತಿಗೆ ಪಡೆದ ಕಂಪನಿ, 2019 ಮಾರ್ಚ್ 31ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಡಬೇಕಿತ್ತು. ಇದುವರೆಗೂ ಶೇ 50 ರಷ್ಟು ಕಾಮಗಾರಿ ನಡೆದಿಲ್ಲ. ಕಾಮಗಾರಿ ವಿಳಂಬದಿಂದಾಗಿ ಹಾಸನದಿಂದ ಮಂಗಳೂರುವರೆಗೆ ಹೆದ್ದಾರಿಯಲ್ಲಿ ವಾಹನ ಓಡಿಸುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಲಾರಿ ಮಾಲೀಕ ಸುಹೀಲ್ ಮಣಿಹೇಳುತ್ತಾರೆ.