<p><strong>ಆಲೂರು</strong>: ಕಸಬಾ ಮರಸು ಹೊಸಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಿದ್ದ ಮತ್ತು ಉಳಿಕೆ ಸರ್ಕಾರಿ ಜಾಗದ ಅಳತೆಗೆ ಸ್ಥಳೀಯರು ಸೋಮವಾರ ಪ್ರತಿಭಟಿಸಿದ್ದರಿಂದ ತಹಶೀಲ್ದಾರ್ ಸ್ಥಳದಿಂದ ನಿರ್ಗಮಿಸಿದರು.</p>.<p>‘ಸರ್ವೆ ನಂಬರ್ 34ರಲ್ಲಿ ಅಳತೆ ನಡೆಯಬೇಕಾಗಿತ್ತು. ಆದರೆ, ಜಾಗದ ಹಕ್ಕಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಳತೆ ಮಾಡಬಾರದು ಎಂದು ಸ್ಥಳೀಯರು ಪ್ರತಿಭಟಿಸಿದ್ದ ವಾಪಸು ಬಂದೆ’ ಎಂದು ತಹಶೀಲ್ದಾರ್ ಶಿರೀನ್ತಾಜ್ ತಿಳಿಸಿದರು.</p>.<p>ಪ್ರತಿಭಟನೆಯಲ್ಲಿದ್ದ ದೇವಪ್ಪ ಮಾತನಾಡಿ, ‘ಮೂರು ತಲೆಮಾರಿನಿಂದ 20 ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಿದ್ದೇವೆ. ಫಾರಂ 50, 53, 57ರಲ್ಲಿ ಅರ್ಜಿ ಹಾಕಿದ್ದರೂ ಮಂಜೂರು ಮಾಡಿಲ್ಲ. ಇದೀಗ ದಲಿತರ ಜಮೀನನ್ನು ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಲು ಮುಂದಾಗಿದ್ದಾರೆ.</p>.<p>ಮರಸು ಗ್ರಾಮಕ್ಕೆ ಸೇರಿದ ಜಮೀನಿಗೆ ಸಾಗುವಳಿ ಪತ್ರ ನೀಡಿದ್ದಾರೆ. ಮರಸು ಹೊಸಹಳ್ಳಿ ಗ್ರಾಮದ ಜಮೀನಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಸ. ನಂ. 35 ರಲ್ಲಿ 12 ಎಕರೆ ಖಾಲಿ ಜಾಗವಿದೆ. ಅಲ್ಲಿ ಮಾರುಕಟ್ಟೆ ನಿರ್ಮಿಸದೆ, ದಲಿತರ ಜಮೀನು ಆಕ್ರಮಿಸುವುದೇಕೆ’ ಎಂದು ಪ್ರಶ್ನಿಸಿದರು.</p>.<p>ಪ್ರತಿಭಟನೆಯಲ್ಲಿ ಲಕ್ಷ್ಮಣ್, ರಮೇಶ್, ಈರೇಶ್, ಶಾಚಿತರಾಜು, ಸುಜಾತಾ, ಶೀಲಾವತಿ, ಲೋಲಾಕ್ಷಿ, ಜ್ಯೋತಿ, ಪದ್ಮಾ, ಶೋಭಾ, ಡೈಲಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು</strong>: ಕಸಬಾ ಮರಸು ಹೊಸಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಿದ್ದ ಮತ್ತು ಉಳಿಕೆ ಸರ್ಕಾರಿ ಜಾಗದ ಅಳತೆಗೆ ಸ್ಥಳೀಯರು ಸೋಮವಾರ ಪ್ರತಿಭಟಿಸಿದ್ದರಿಂದ ತಹಶೀಲ್ದಾರ್ ಸ್ಥಳದಿಂದ ನಿರ್ಗಮಿಸಿದರು.</p>.<p>‘ಸರ್ವೆ ನಂಬರ್ 34ರಲ್ಲಿ ಅಳತೆ ನಡೆಯಬೇಕಾಗಿತ್ತು. ಆದರೆ, ಜಾಗದ ಹಕ್ಕಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಳತೆ ಮಾಡಬಾರದು ಎಂದು ಸ್ಥಳೀಯರು ಪ್ರತಿಭಟಿಸಿದ್ದ ವಾಪಸು ಬಂದೆ’ ಎಂದು ತಹಶೀಲ್ದಾರ್ ಶಿರೀನ್ತಾಜ್ ತಿಳಿಸಿದರು.</p>.<p>ಪ್ರತಿಭಟನೆಯಲ್ಲಿದ್ದ ದೇವಪ್ಪ ಮಾತನಾಡಿ, ‘ಮೂರು ತಲೆಮಾರಿನಿಂದ 20 ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಿದ್ದೇವೆ. ಫಾರಂ 50, 53, 57ರಲ್ಲಿ ಅರ್ಜಿ ಹಾಕಿದ್ದರೂ ಮಂಜೂರು ಮಾಡಿಲ್ಲ. ಇದೀಗ ದಲಿತರ ಜಮೀನನ್ನು ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಲು ಮುಂದಾಗಿದ್ದಾರೆ.</p>.<p>ಮರಸು ಗ್ರಾಮಕ್ಕೆ ಸೇರಿದ ಜಮೀನಿಗೆ ಸಾಗುವಳಿ ಪತ್ರ ನೀಡಿದ್ದಾರೆ. ಮರಸು ಹೊಸಹಳ್ಳಿ ಗ್ರಾಮದ ಜಮೀನಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಸ. ನಂ. 35 ರಲ್ಲಿ 12 ಎಕರೆ ಖಾಲಿ ಜಾಗವಿದೆ. ಅಲ್ಲಿ ಮಾರುಕಟ್ಟೆ ನಿರ್ಮಿಸದೆ, ದಲಿತರ ಜಮೀನು ಆಕ್ರಮಿಸುವುದೇಕೆ’ ಎಂದು ಪ್ರಶ್ನಿಸಿದರು.</p>.<p>ಪ್ರತಿಭಟನೆಯಲ್ಲಿ ಲಕ್ಷ್ಮಣ್, ರಮೇಶ್, ಈರೇಶ್, ಶಾಚಿತರಾಜು, ಸುಜಾತಾ, ಶೀಲಾವತಿ, ಲೋಲಾಕ್ಷಿ, ಜ್ಯೋತಿ, ಪದ್ಮಾ, ಶೋಭಾ, ಡೈಲಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>