ತಾಲ್ಲೂಕಿನಲ್ಲಿ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಬೆಳೆ ಹುಲುಸಾಗಿದೆ. ಆದರೆ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಎರಡು ದಿನ ಸಂಜೆ ವೇಳೆ ಮಳೆಯಾಯಿತು. ಅಷ್ಟರಲ್ಲಿ ಕೆಲ ರೈತರು ಭತ್ತ ಕೊಯ್ಲು ಮಾಡಿದ್ದರು. ಮಳೆಯಾದ್ದರಿಂದ ಗದ್ದೆಯಲ್ಲಿ ಕೊಯ್ಲು ಮಾಡಿದ್ದ ಭತ್ತ ತೇವಗೊಂಡಿದೆ. ಒಂದು ವಾರ ಕಾಲ ಬಿಸಿಲು ವಾತಾವರಣವಿದ್ದರೆ ಮಾತ್ರ ಉದುರಿ ಉಳಿದ ಭತ್ತವನ್ನು ಕಾಪಾಡಿಕೊಳ್ಳಬಹುದು. ಇಲ್ಲವಾದರೆ ಕಷ್ಟವಾಗುತ್ತದೆ.