ಇತರೆ ವರ್ಗದವರನ್ನೂ ಸೇರಿಸಿ: ರಾಜ್ಯ ಸರ್ಕಾರ ಲಾಕ್ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಉದ್ದೇಶದಿಂದ ₹ 1,610 ಕೋಟಿ ಆರ್ಥಿಕ ನೆರವು ಘೋಷಣೆ ಮಾಡಿದೆ. ಎರಡನೇ ಹಂತದಲ್ಲಿಯೂ ಇತರೇ ಅಸಂಘಟಿತ ವರ್ಗಕ್ಕೂ ಆದ್ಯತೆನೀಡಬೇಕು. ಬೀದಿ ಬದಿ ವ್ಯಾಪಾರಿಗಳು, ಅರ್ಚಕರು, ಚಿನ್ನ ಬೆಳ್ಳಿ ಕುಶಲಕರ್ಮಿಗಳು, ಪಾನಿಪುರಿ ವ್ಯಾಪಾರಿಗಳು, ಫಾಸ್ಟ್ ಫುಡ್ ಮಾರಾಟ ಮಾಡುವವರು, ಮರಗೆಲಸ ಮಾಡುವವರು, ಹಮಾಲಿಗಳನ್ನೂ ಪರಿಗಣಿಸಬೇಕು. ಇವರಿಗೆ ಕನಿಷ್ಠ ₹ 5 ರಿಂದ 10 ಸಾವಿರ ಸಹಾಯ ಧನ ನೀಡಬೇಕು ಎಂದು ಒತ್ತಾಯಿಸಿದರು.