<p><strong>ಹಾಸನ</strong>: ‘ಆರ್ಎಸ್ಎಸ್ ನಿಷೇಧಿಸಲಾಗದು. ಸಂಘ– ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಸಭೆ, ಸಮಾರಂಭ ಪರೇಡ್ಗಳನ್ನು ಮಾಡಬಾರದೆಂದು ಸರ್ಕಾರ ಹೇಳಿದೆ. ರಾಜಕೀಯ ಬಂಡವಾಳಕ್ಕಾಗಿ ಇಂಥ ವಿಷಯಗಳನ್ನು ಎಳೆದು ತರಲಾಗುತ್ತಿದೆ. ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಾಂಧೀಜಿಯವರ ಹತ್ಯೆಯಾದಾಗ ನೆಹರು ಆರ್ಎಸ್ಎಸ್ ನಿಷೇಧಿಸಿದ್ದರು. ಬಳಿಕ ಆದೇಶವನ್ನು ವಾಪಸ್ ಪಡೆದರು. ಅವರಿಗಿಂತ ಖರ್ಗೆ, ಸಿದ್ದರಾಮಯ್ಯ ದೊಡ್ಡವರೇ? ಸಮಾಜದಲ್ಲಿ ಸರ್ಕಾರ ಸಂಘರ್ಷ ಸೃಷ್ಟಿಸುತ್ತಿದೆ’ ಎಂದು ದೂರಿದರು.</p>.<p>‘ಧರ್ಮಸ್ಥಳದ ವಿಷಯದಲ್ಲೂ ಇಂಥದ್ದೇ ನಡೆಯನ್ನು ಸರ್ಕಾರ ಅನುಸರಿಸಿದೆ. ಅರ್ಜಿ ಕೊಟ್ಟವರನ್ನು ಬಿಟ್ಟು, ಚಿನ್ನಯ್ಯ ಎಂಬುವನನ್ನು ಸೃಷ್ಟಿಸಿ ನಾಟಕ ನಡೆಸಿದರು. ಎಸ್ಐಟಿ ರಚಿಸಿ ಆತನನ್ನು ಹಿಡಿದಿಟ್ಟುಕೊಂಡು ಉಳಿದವರನ್ನು ಬಿಟ್ಟಿದ್ದಾರೆ. ಅವರೆಲ್ಲ ರಾಜಾರೋಷವಾಗಿ ಓಡಾಡುತ್ತಿದ್ದು, ಈ ನಡುವೆ ಎಸ್ಐಟಿಗೆ ಬಹುಮಾನ ನೀಡಲು ಹೊರಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.</p>.<p>‘ಇವರೇ ದೊಡ್ಡ ದರೋಡೆಕೋರರು. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ಗೆ 136 ಸ್ಥಾನ ಬರಲಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಹಾಗಾದರೆ, ಮತಗಳವು ಮಾಡಿಯೇ ಅಷ್ಟು ಸ್ಥಾನ ಗೆದ್ದರೆ’ ಎಂದು ಪ್ರಶ್ನಿಸಿದರು.</p>.<p>‘ಅಳಂದ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸುತ್ತಾರೆ. ಆದರೆ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್. ಮತಗಳ್ಳತನ ನಡೆದಿದ್ದರೆ ಬಿಜೆಪಿ ಗೆಲ್ಲಬೇಕಿತ್ತಲ್ಲವೇ. ಜನರ ಕಷ್ಟಕ್ಕೆ ಸ್ಪಂದಿಸುವುದು ಈ ಸರ್ಕಾರಕ್ಕೆ ಬೇಕಿಲ್ಲ. ಇಂತಹ ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಟೀಕಿಸಿದರು.</p>.<p>‘ದೀಪಾವಳಿ ಮುಗಿದ ನಂತರ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡಂತೆ ರಾಜ್ಯದಾದ್ಯಂತ ‘ಜನರೊಂದಿಗೆ ಜನತಾದಳ’ ಘೋಷಣೆಯೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಗುವುದು’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ‘ಆರ್ಎಸ್ಎಸ್ ನಿಷೇಧಿಸಲಾಗದು. ಸಂಘ– ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಸಭೆ, ಸಮಾರಂಭ ಪರೇಡ್ಗಳನ್ನು ಮಾಡಬಾರದೆಂದು ಸರ್ಕಾರ ಹೇಳಿದೆ. ರಾಜಕೀಯ ಬಂಡವಾಳಕ್ಕಾಗಿ ಇಂಥ ವಿಷಯಗಳನ್ನು ಎಳೆದು ತರಲಾಗುತ್ತಿದೆ. ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಾಂಧೀಜಿಯವರ ಹತ್ಯೆಯಾದಾಗ ನೆಹರು ಆರ್ಎಸ್ಎಸ್ ನಿಷೇಧಿಸಿದ್ದರು. ಬಳಿಕ ಆದೇಶವನ್ನು ವಾಪಸ್ ಪಡೆದರು. ಅವರಿಗಿಂತ ಖರ್ಗೆ, ಸಿದ್ದರಾಮಯ್ಯ ದೊಡ್ಡವರೇ? ಸಮಾಜದಲ್ಲಿ ಸರ್ಕಾರ ಸಂಘರ್ಷ ಸೃಷ್ಟಿಸುತ್ತಿದೆ’ ಎಂದು ದೂರಿದರು.</p>.<p>‘ಧರ್ಮಸ್ಥಳದ ವಿಷಯದಲ್ಲೂ ಇಂಥದ್ದೇ ನಡೆಯನ್ನು ಸರ್ಕಾರ ಅನುಸರಿಸಿದೆ. ಅರ್ಜಿ ಕೊಟ್ಟವರನ್ನು ಬಿಟ್ಟು, ಚಿನ್ನಯ್ಯ ಎಂಬುವನನ್ನು ಸೃಷ್ಟಿಸಿ ನಾಟಕ ನಡೆಸಿದರು. ಎಸ್ಐಟಿ ರಚಿಸಿ ಆತನನ್ನು ಹಿಡಿದಿಟ್ಟುಕೊಂಡು ಉಳಿದವರನ್ನು ಬಿಟ್ಟಿದ್ದಾರೆ. ಅವರೆಲ್ಲ ರಾಜಾರೋಷವಾಗಿ ಓಡಾಡುತ್ತಿದ್ದು, ಈ ನಡುವೆ ಎಸ್ಐಟಿಗೆ ಬಹುಮಾನ ನೀಡಲು ಹೊರಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.</p>.<p>‘ಇವರೇ ದೊಡ್ಡ ದರೋಡೆಕೋರರು. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ಗೆ 136 ಸ್ಥಾನ ಬರಲಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಹಾಗಾದರೆ, ಮತಗಳವು ಮಾಡಿಯೇ ಅಷ್ಟು ಸ್ಥಾನ ಗೆದ್ದರೆ’ ಎಂದು ಪ್ರಶ್ನಿಸಿದರು.</p>.<p>‘ಅಳಂದ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸುತ್ತಾರೆ. ಆದರೆ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್. ಮತಗಳ್ಳತನ ನಡೆದಿದ್ದರೆ ಬಿಜೆಪಿ ಗೆಲ್ಲಬೇಕಿತ್ತಲ್ಲವೇ. ಜನರ ಕಷ್ಟಕ್ಕೆ ಸ್ಪಂದಿಸುವುದು ಈ ಸರ್ಕಾರಕ್ಕೆ ಬೇಕಿಲ್ಲ. ಇಂತಹ ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಟೀಕಿಸಿದರು.</p>.<p>‘ದೀಪಾವಳಿ ಮುಗಿದ ನಂತರ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡಂತೆ ರಾಜ್ಯದಾದ್ಯಂತ ‘ಜನರೊಂದಿಗೆ ಜನತಾದಳ’ ಘೋಷಣೆಯೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಗುವುದು’ ಎಂದು ಕುಮಾರಸ್ವಾಮಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>