‘ವಿಶ್ವಪ್ರಸಿದ್ದ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿ, ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಶಿಲಾ ಶಾಸನಗಳು, ಧಾರ್ಮಿಕ ವಿಧಿ, ಕಲೆ-ಸಾಹಿತ್ಯದ ಜೀವಂತಿಕೆಯನ್ನು ನೋಡಿ ಬಹಳ ಖುಷಿಯಾಯಿತು. ಶಾಲಾ ದಿನಗಳಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಮುನಿಗಳ ಬಗ್ಗೆ ಓದಿದ್ದೆನು. ಅಂದಿನಿಂದಲೂ ಶ್ರವಣಬೆಳಗೊಳಕ್ಕೆ ಬರಬೇಕು ಎಂದು ಅಪೇಕ್ಷೆ ಇತ್ತು ಎಂದು ರಾಜ್ಯಪಾಲ ರವಿ ಹೇಳಿದರು. 2030ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದರು.