ಬೆಳಿಗ್ಗೆ 10 ಗಂಟೆಗೆ ಮಹಿಳಾ ಹರಿದಾಸ ಸಂಘದವರಿಂದ ದೇವರನಾಮ, 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಯಾದವ ಮುಖಂಡರಾದ ಸುದರ್ಶನ್ (ಹರ್ಷ), ನಾರಾಯಣ, ಗೋಪಿನಾಥ್, ಗಾರೆ ಬಸವರಾಜು, ಕುಸುಮಾ, ಗೋವಿಂದರಾಜು, ನಾಗರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರ್ಚಕರಾದ ರಾಮಸ್ವಾಮಿ ಭಟ್ಟರು, ವೆಂಕಟನರಸಿಂಹನ್, ರಾಮು, ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿ, ಉತ್ಸವ ಸಾಗುವ ಮಾರ್ಗದುದ್ದಕ್ಕೂ ಭಕ್ತರಿಗೆ ಹಾಲನ್ನು ನೀಡಿದರು.