ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಮಾತನಾಡಿ, ‘ಜಲಶಕ್ತಿಅಭಿಯಾನದಡಿಯಲ್ಲಿ 100 ದಿನಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಸಮಗ್ರವಾಗಿಯೋಜನೆ ತಯಾರಿಸಿ ಗುರಿ ನಿಗದಿಪಡಿಸಿ. ಜೂನ್, ಜುಲೈ ತಿಂಗಳಲ್ಲಿ ಮಳೆ ಪ್ರಾರಂಭವಾಗುತ್ತದೆ ಕೆರೆ, ಕೋಡಿ, ತೂಬುಗಳ ದುರಸ್ತಿಯಂತಹ ಕೆಲಸ ಮಾಡುವ ಮೂಲಕ ಜಲ ಸಂರಕ್ಷಣೆಗೆ ಒತ್ತು ನೀಡಿ. ಕೆರೆಗಳ ಹೂಳೆತ್ತುವುದರ ಜತೆಗೆ ನಾಲೆಗಳ ಸ್ವಚ್ಛತೆಗೂ ಗಮನ ಹರಿಸಬೇಕು’ ಎಂದರು.