ಕನ್ನಡ ನೆಲ, ಜಲ, ನಾಡು, ನುಡಿಗೆ ಚ್ಯುತಿ ಬಂದಾಗ ವಿಶೇಷ ಹಾಗೂ ವಿಭಿನ್ನ ಶೈಲಿಯಲ್ಲಿ ಹೋರಾಟಕ್ಕಿಳಿಯುತ್ತಾರೆ. ತಮ್ಮ ದ್ವಿಚಕ್ರ ವಾಹನಕ್ಕೂ ಕೆಂಪು ಮತ್ತು ಹಳದಿ ಬಣ್ಣವನ್ನು ಹೊಡೆಸಿಕೊಂಡಿದ್ದು, ಬೈಕ್ ಮೇಲೆ ಕನ್ನಡಾಭಿಮಾನದ ವಿವಿಧ ನುಡಿಗಟ್ಟುಗಳನ್ನು ಬರೆಸಿಕೊಂಡಿದ್ದಾರೆ. ತಮ್ಮ ಅಂಗಡಿ ನಾಮಫಲಕವನ್ನು ಕೆಂಪು, ಹಳದಿ ಬಣ್ಣದಲ್ಲಿ ಬರೆಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ದಿನದಂದು ಮಾರಾಟ ಮಾಡುವ ರೈತರ ಸಲಕರಣೆಗಳನ್ನು ಕೆಂಪು, ಹಳದಿಯಿಂದ ಕಂಗೊಳಿಸುವಂತೆ ಮಾಡಿದ್ದರು.