<p><strong>ಶ್ರವಣಬೆಳಗೊಳ</strong>: ಕನಸು ಕಾಣುವ ಹರೆಯದ ವಯಸ್ಸಿನಲ್ಲಿ ಸುಂದರವಾದ ದೇಶವನ್ನು ಕಟ್ಟುವ ಅಛಲ ಶಕ್ತಿ ವಿದ್ಯಾರ್ಥಿಗಳಲ್ಲಿರುತ್ತದೆ ಎಂದು ಹಾಸನದ ಹಮ್ ಶೈನ್ ಎಲೆಕ್ಟ್ರಾನಿಕ್ಸ್ ಮತ್ತು ಎನರ್ಜಿ ಸಿಸ್ಟಮ್ನ ಮಾಲೀಕ ಎಚ್.ಜೆ.ಹಂಸರಾಜ್ ಹೇಳಿದರು.</p>.<p>ಪಟ್ಟಣದ ಗೊಮ್ಮಟನಗರದ ಬಾಹುಬಲಿ ಎಂನಿಜಿಯರಿಂಗ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆವಿಷ್ಕಾರ 2019ರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು.</p>.<p>‘ಪ್ರಪಂಚದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ, ಗೌರವ ಇದೆ. ಹಾಗಾಗಿಯೇ ‘ಇಂಡಿಯನ್ ಬ್ರೈನ್ ಈಸ್ ಬೆಸ್ಟ್ ಬ್ರೈನ್’ ಎಂದು ಹೇಳುತ್ತಾ ಅನೇಕ ಸಂಗತಿಗಳಲ್ಲಿ ಭಾರತೀಯರ ಆಲೋಚನಾ ಶಕ್ತಿ ಹೊರ ದೇಶದವರಿಗಿಂತ ಹೆಚ್ಚಿಗೆ ಇದ್ದು, ಎಲ್ಲೆಡೆಯಿಂದ ಪ್ರಶಂಸೆಗೆ ಒಳಗಾಗುತ್ತಿದ್ದಾರೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗೋಮಟೇಶ್ ಎಂ.ರಾವಣ್ಣವರ್ ಮಾತನಾಡಿ, ‘ಕರ್ನಾಟಕದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 15 ಸಾವಿರ ಪ್ರಾಜೆಕ್ಟ್ಗಳು ಅನಾವರಣಗೊಳ್ಳುತ್ತಿವೆ. ಅದರಿಂದ ಈ ದೇಶದ ಬಡವರಿಗೆ, ಕೃಷಿಕರಿಗೆ, ಸೈನಿಕರಿಗೆ ಪ್ರಯೋಜನವಾಗುವುದರ ಬಗ್ಗೆ ಯೋಚಿಸಬೇಕಾಗಿದೆ. ಪ್ರಸಕ್ತ ಸಾಲಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಇನ್ಫಾರ್ಮೇಷನ್ ಅಂಡ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳಿಂದ 47 ಪ್ರಾಜೆಕ್ಟ್ಗಳು ಅನಾವರಣಗೊಂಡಿವೆ. ಅವುಗಳಲ್ಲಿ 4 ಪ್ರಾಜೆಕ್ಟ್ಗಳಿಗೆ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಆರ್ಥಿಕ ನೆರವು ದೊರಕಿದ್ದು, ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಪ್ರದರ್ಶನಕ್ಕೆ ಆಯ್ಕೆ ಆಗಿವೆ ಎಂದು ತಿಳಿಸಿದರು.</p>.<p>ಎಂಜಿನಿಯರಿಂಗ್ನಲ್ಲಿ ಥಿಯರಿಗಿಂತ ಪ್ರಾಯೋಗಿಕಕ್ಕೆ ಮುಖ್ಯವಾಗಿದ್ದರಿಂದ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯವು ಇನ್ನು ಮುಂದೆ 7 ಮತ್ತು 8ನೇ ಸೆಮಿಸ್ಟರ್ನಲ್ಲಿಯೇ 2 ಪ್ರಾಜೆಕ್ಟ್ಗಳಿಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ತಮ್ಮಲ್ಲಿರುವ ಕೌಶಲವನ್ನು ಹೊರಹಾಕಿ ದೇಶದ ಅಭಿವೃದ್ಧಿಗೆ ಮುಂದಾಗುವಂತೆ ಕಿವಿಮಾತು ಹೇಳಿದರು.</p>.<p>‘ಆವಿಷ್ಕಾರ – 19 ಪ್ರಾಜೆಕ್ಟ್ ಎಕ್ಸಿಬಿಷನ್ ಪ್ರೊಸಿಡಿಂಗ್ಸ್ ದಾಖಲೆ’ಯ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ಪ್ರೊ.ನಾಗರಾಜ್, ವಿದ್ಯಾರ್ಥಿ ತತ್ವಾ, ಪೂಜಾ, ಶೀತಲ್ ಜೈನ್, ದೀಕ್ಷಾ, ಅಮೋಘ್, ಹರ್ಷಿತಾ ಬಿ.ಕೆ ಇದ್ದರು.</p>.<p>ವಿದ್ಯಾರ್ಥಿಗಳು ತಯಾರಿಸಿರುವ ಪ್ರಾಜೆಕ್ಟ್ಗಳ ಬಗ್ಗೆ ಉಪನ್ಯಾಸಕಿ ಸವಿತಾ ಜಿ.ರಾವಣ್ಣವರ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರವಣಬೆಳಗೊಳ</strong>: ಕನಸು ಕಾಣುವ ಹರೆಯದ ವಯಸ್ಸಿನಲ್ಲಿ ಸುಂದರವಾದ ದೇಶವನ್ನು ಕಟ್ಟುವ ಅಛಲ ಶಕ್ತಿ ವಿದ್ಯಾರ್ಥಿಗಳಲ್ಲಿರುತ್ತದೆ ಎಂದು ಹಾಸನದ ಹಮ್ ಶೈನ್ ಎಲೆಕ್ಟ್ರಾನಿಕ್ಸ್ ಮತ್ತು ಎನರ್ಜಿ ಸಿಸ್ಟಮ್ನ ಮಾಲೀಕ ಎಚ್.ಜೆ.ಹಂಸರಾಜ್ ಹೇಳಿದರು.</p>.<p>ಪಟ್ಟಣದ ಗೊಮ್ಮಟನಗರದ ಬಾಹುಬಲಿ ಎಂನಿಜಿಯರಿಂಗ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆವಿಷ್ಕಾರ 2019ರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು.</p>.<p>‘ಪ್ರಪಂಚದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ, ಗೌರವ ಇದೆ. ಹಾಗಾಗಿಯೇ ‘ಇಂಡಿಯನ್ ಬ್ರೈನ್ ಈಸ್ ಬೆಸ್ಟ್ ಬ್ರೈನ್’ ಎಂದು ಹೇಳುತ್ತಾ ಅನೇಕ ಸಂಗತಿಗಳಲ್ಲಿ ಭಾರತೀಯರ ಆಲೋಚನಾ ಶಕ್ತಿ ಹೊರ ದೇಶದವರಿಗಿಂತ ಹೆಚ್ಚಿಗೆ ಇದ್ದು, ಎಲ್ಲೆಡೆಯಿಂದ ಪ್ರಶಂಸೆಗೆ ಒಳಗಾಗುತ್ತಿದ್ದಾರೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗೋಮಟೇಶ್ ಎಂ.ರಾವಣ್ಣವರ್ ಮಾತನಾಡಿ, ‘ಕರ್ನಾಟಕದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 15 ಸಾವಿರ ಪ್ರಾಜೆಕ್ಟ್ಗಳು ಅನಾವರಣಗೊಳ್ಳುತ್ತಿವೆ. ಅದರಿಂದ ಈ ದೇಶದ ಬಡವರಿಗೆ, ಕೃಷಿಕರಿಗೆ, ಸೈನಿಕರಿಗೆ ಪ್ರಯೋಜನವಾಗುವುದರ ಬಗ್ಗೆ ಯೋಚಿಸಬೇಕಾಗಿದೆ. ಪ್ರಸಕ್ತ ಸಾಲಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಇನ್ಫಾರ್ಮೇಷನ್ ಅಂಡ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳಿಂದ 47 ಪ್ರಾಜೆಕ್ಟ್ಗಳು ಅನಾವರಣಗೊಂಡಿವೆ. ಅವುಗಳಲ್ಲಿ 4 ಪ್ರಾಜೆಕ್ಟ್ಗಳಿಗೆ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಆರ್ಥಿಕ ನೆರವು ದೊರಕಿದ್ದು, ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಪ್ರದರ್ಶನಕ್ಕೆ ಆಯ್ಕೆ ಆಗಿವೆ ಎಂದು ತಿಳಿಸಿದರು.</p>.<p>ಎಂಜಿನಿಯರಿಂಗ್ನಲ್ಲಿ ಥಿಯರಿಗಿಂತ ಪ್ರಾಯೋಗಿಕಕ್ಕೆ ಮುಖ್ಯವಾಗಿದ್ದರಿಂದ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯವು ಇನ್ನು ಮುಂದೆ 7 ಮತ್ತು 8ನೇ ಸೆಮಿಸ್ಟರ್ನಲ್ಲಿಯೇ 2 ಪ್ರಾಜೆಕ್ಟ್ಗಳಿಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ತಮ್ಮಲ್ಲಿರುವ ಕೌಶಲವನ್ನು ಹೊರಹಾಕಿ ದೇಶದ ಅಭಿವೃದ್ಧಿಗೆ ಮುಂದಾಗುವಂತೆ ಕಿವಿಮಾತು ಹೇಳಿದರು.</p>.<p>‘ಆವಿಷ್ಕಾರ – 19 ಪ್ರಾಜೆಕ್ಟ್ ಎಕ್ಸಿಬಿಷನ್ ಪ್ರೊಸಿಡಿಂಗ್ಸ್ ದಾಖಲೆ’ಯ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ಪ್ರೊ.ನಾಗರಾಜ್, ವಿದ್ಯಾರ್ಥಿ ತತ್ವಾ, ಪೂಜಾ, ಶೀತಲ್ ಜೈನ್, ದೀಕ್ಷಾ, ಅಮೋಘ್, ಹರ್ಷಿತಾ ಬಿ.ಕೆ ಇದ್ದರು.</p>.<p>ವಿದ್ಯಾರ್ಥಿಗಳು ತಯಾರಿಸಿರುವ ಪ್ರಾಜೆಕ್ಟ್ಗಳ ಬಗ್ಗೆ ಉಪನ್ಯಾಸಕಿ ಸವಿತಾ ಜಿ.ರಾವಣ್ಣವರ್ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>